ಕಾಪು: ಕೋವಿಡ್‌ಗೆ ನೊಂದು ನೇಣಿಗೆ ಶರಣಾದ ಸೋಂಕಿತ

Update: 2020-10-31 15:24 GMT

ಕಾಪು, ಅ.31: ಕೊರೋನಾ ಸೋಂಕಿಗೆ ಒಳಗಾಗಿ ಕ್ವಾರಂಟೈನ್‌ನಲ್ಲಿದ್ದ ವೃದ್ಧರೊಬ್ಬರು ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪುರದ ಮೂಡು ಕಲ್ಮಂಜೆ ಎಂಬಲ್ಲಿ ಅ.30ರಂದು ನಸುಕಿನ ವೇಳೆ ನಡೆದಿದೆ.

ಮೃತರನ್ನು ಮೂಡುಕಲ್ಮಂಜೆಯ ರಾಘು ಆರ್.ಬಂಗೇರ(79) ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆ ಕೋವಿಡ್-19ಗೆ ತುತ್ತಾದ ಇವರು ಚಿಕಿತ್ಸೆಯ ಬಳಿಕ ಮನೆಯಲ್ಲಿಯೇ ಕ್ವಾರೆಂಟಿನ್ ಆಗಿದ್ದರು. ಇದರಿಂದ ಬೇಸರ ಗೊಂಡ ಅವರು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಬದಿಯಲ್ಲಿರುವ ದನದ ಕೊಟ್ಟಿಗೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News