ಅತ್ಯಾಚಾರ ಯತ್ನ ಮುಚ್ಚಿಡಲು ಸೊಸೆಯನ್ನೇ ಕೊಂದ ಸೋದರಮಾವ

Update: 2020-11-03 04:09 GMT
 ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿ ವಕೀಲ್ ಪೋದಾರ್ 

ಹೊಸದಿಲ್ಲಿ, ನ.3: ಹದಿಹರೆಯದ ಸೊಸೆಯ ಮೇಲೆ ಸೋದರ ಮಾವ ಅತ್ಯಾಚಾರ ಯತ್ನ ನಡೆಸಿದ್ದನ್ನು ಮುಚ್ಚಿಹಾಕುವ ಸಲುವಾಗಿ ಸೊಸೆಯನ್ನು ಹತ್ಯೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ರಾಜಧಾನಿಯಲ್ಲಿ ಅತ್ತೆ-ಮಾವನ ಜತೆಗೆ ಇದ್ದ ಸೊಸೆಯನ್ನು ಹತ್ಯೆ ಮಾಡಿ ಮೃತದೇಹವನ್ನು ಬೆಡ್‌ಬಾಕ್ಸ್‌ನಲ್ಲಿ ಮುಚ್ಚಿಡಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಈಶಾನ್ಯ ದಿಲ್ಲಿಯ ನಂದನಗರಿಯಲ್ಲಿ ಕಳೆದ ತಿಂಗಳು ಈ ಹತ್ಯೆ ನಡೆದಿದೆ. ಹದಿಹರೆಯದ ಯುವತಿ ಓದಿನ ಸಲುವಾಗಿ ತನ್ನ ಮಾವ ವಕೀಲ್ ಪೋದಾರ್ (45) ಹಾಗೂ ಆತನ ಪತ್ನಿ ಜತೆ ವಾಸವಿದ್ದಳು. ಅಕ್ಟೋಬರ್ 23ರಿಂದ ಯುವತಿ ನಾಪತ್ತೆಯಾಗಿದ್ದಳು. ಯುವತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಈ ದಂಪತಿಯ ಮನೆಯಲ್ಲಿದ್ದ ಬೆಡ್‌ಬಾಕ್ಸ್‌ನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಅಕ್ಟೋಬರ್ 23ರಂದು ಮಧ್ಯಾಹ್ನದಿಂದ ಸೊಸೆ ಮನೆಯಲ್ಲಿರದೆ ನಾಪತ್ತೆಯಾಗಿರುವುದು ಅತ್ತೆ ಹೇಳಿಕೆ ನೀಡಿದ್ದಳು. ಉತ್ತರ ಪ್ರದೇಶದ ಗಾಝಿಯಾಬಾದ್‌ನಲ್ಲಿದ್ದ ಅನಾಥಾಶ್ರಮಕ್ಕೆ ಯುವತಿಯನ್ನು ಸೇರಿಸಿಬಂದಿದ್ದಾಗಿ ಪತಿ ಹೇಳಿದ್ದರು ಎಂದು ಆರೋಪಿ ಮಹಿಳೆ ವಿವರಿಸಿದ್ದಾಳೆ. ಆದರೆ ಅನಾಥಾಶ್ರಮಕ್ಕೆ ಅಂದು ಯಾವ ಯುವತಿಯನ್ನೂ ಸೇರಿಸಿಲ್ಲ ಎನ್ನುವುದು ಪೊಲೀಸರಿಗೆ ತಿಳಿದುಬಂತು.

ಪ್ರಕರಣದ ವಿಚಾರಣೆ ನಡೆಯುವ ವೇಳೆ ವಕೀಲ್ ಪೋದಾರ್ ನಾಪತ್ತೆಯಾಗಿದ್ದ. ಇದು ಯುವತಿಯ ಕಣ್ಮರೆ ಪ್ರಕರಣದ ಹಿಂದೆ ಈತನ ಕೈವಾಡ ಇರುವ ಬಗ್ಗೆ ಪೊಲೀಸರಲ್ಲಿ ಅನುಮಾನ ಮೂಡಿಸಿತು ಎಂದು ಡಿಸಿಪಿ ವೇದ್‌ಪ್ರಕಾಶ್ ಸೂರ್ಯ ವಿವರಿಸಿದ್ದಾರೆ. ಬಳಿಕ ಪೊಲೀಸರು ಬಿಹಾರದ ಬಸ್ ನಿಲ್ದಾಣದಲ್ಲಿ ಪೋದಾರ್‌ನನ್ನು ಬಂಧಿಸಿದ್ದರು.

"ಮೃತ ಯುವತಿ ನನ್ನ ಸೊಸೆ. ಕಳೆದ ತಿಂಗಳು ಆಕೆಯ ಜತೆ ದೈಹಿಕ ಸಂಪರ್ಕ ಮಾಡಲು ಯತ್ನಿಸಿದಾಗ ಅದಕ್ಕೆ ಆಕ್ಷೇಪಿಸಿದ್ದಳು. ಈ ಘಟನೆ ಬಗ್ಗೆ ಪತ್ನಿಗೆ ಗೊತ್ತಾದಾಗ, ಇಬ್ಬರ ನಡುವೆ ಜಗಳವಾಗಿತ್ತು. ಆದರೂ ಪೋದಾರ್, ತನ್ನ ಸೊಸೆ ಮನೆಯಲ್ಲೇ ಇರಬೇಕು ಎಂದು ಬಯಸಿದ್ದ. ಆದರೆ ಆಕೆಯನ್ನು ಹಳ್ಳಿಗೆ ಮರಳಿ ಕಳುಹಿಸಬೇಕು ಎಂದು ನಿರ್ಧರಿಸಲಾಗಿತ್ತು. ಆಕೆ ಓದು ಮುಂದುವರಿಸಬೇಕು ಎಂಬ ಕಾರಣಕ್ಕೆ ಸಂತ್ರಸ್ತೆ ಹಳ್ಳಿಗೆ ತೆರಳಲು ನಿರಾಕರಿಸಿದ್ದಳು. ಈ ವಿಚಾರದಲ್ಲಿ ದಂಪತಿ ನಡುವೆ ಹಲವು ಬಾರಿ ಜಗಳ ನಡೆದಿತ್ತು. ಬಳಿಕ ಆ ಯುವತಿಯನ್ನು ಕೊಲ್ಲುವಂತೆ ಪತ್ನಿ ತನ್ನ ಗಂಡನಿಗೆ ಸೂಚಿಸಿದಳು ಎಂದು ಸೂರ್ಯ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News