ಅರ್ನಬ್ ಮಧ್ಯಂತರ ಜಾಮೀನು ವಿಚಾರಣೆ: ತೀರ್ಪು ಕಾಯ್ದಿರಿಸಿದ ಬಾಂಬೆ ಹೈಕೋರ್ಟ್

Update: 2020-11-07 12:47 GMT

ಹೊಸದಿಲ್ಲಿ: 2018ರ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣಕ್ಕೆ ಸಂಬಂಧಿಸಿ ಮಧ್ಯಂತರ ಜಾಮೀನು ಕೋರಿ ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. ಈ ಹಿನ್ನೆಲೆಯಲ್ಲಿ ಅರ್ನಬ್ ಗೋಸ್ವಾಮಿಯವರ ಜೈಲುವಾಸ ಮುಂದುವರಿಯಲಿದೆ.

ಇದೇ ಸಂದರ್ಭ ಕೋರ್ಟ್ ಸೆಕ್ಷನ್ 439ರಡಿ ಅರ್ಜಿದಾರರು ಸೆಶನ್ಸ್ ಕೋರ್ಟ್ ಗಳಲ್ಲಿ ಜಾಮೀನು ಕೋರಬಹುದು. ಜಾಮೀನು ಅರ್ಜಿ ಸಲ್ಲಿಕೆಯಾದರೆ ಕೋರ್ಟ್ 4 ದಿನಗಳೊಳಗೆ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News