ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ

Update: 2020-11-10 15:53 GMT

ಉಡುಪಿ, ನ.10: ಸಂತೆಕಟ್ಟೆಯ ವಿಘ್ನೇಶ್ ಟವರ್ ಬಿಲ್ಡಿಂಗ್ನ ಹಿಂಭಾಗ ದಲ್ಲಿರುವ ಖಾಲಿ ಜಾಗದಲ್ಲಿ 50ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯ ಮೃತ ದೇಹವು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ನ.10ರಂದು ಬೆಳಗ್ಗೆ ಪತ್ತೆಯಾಗಿದೆ.

ಮೃತದೇಹವು ನೆಲದಲ್ಲಿ ಕವುಚಿ ಬಿದ್ದ ಸ್ಥಿತಿಯಲ್ಲಿದ್ದು, ಮೃತರು ಕಪ್ಪು ಫ್ಯಾಂಟ್ ಮತ್ತು ನೇರಳೆ ಬಣ್ಣದ ಉದ್ದ ಕೈಯ ಶರ್ಟ್ ಹಾಗೂ ಬನಿಯನ್ ಧರಿಸಿದ್ದಾರೆ. ಇವರು ಅಲೆಮಾರಿ ಭಿಕ್ಷುಕನಂತೆ ಕಂಡುಬರುತ್ತಿದ್ದು, ಆತನು ಸುಮಾರು 7-8 ದಿನಗಳ ಹಿಂದೆ ಈ ವ್ಯಕ್ತಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News