ಶಿರಾ, ಆರ್.ಆರ್.ನಗರ ಜಯ ಪ್ರಜಾಪ್ರಭುತ್ವದ ಗೆಲುವು: ಕುಯಿಲಾಡಿ

Update: 2020-11-10 15:58 GMT

ಉಡುಪಿ, ನ.10: ರಾಜ್ಯದ ಶಿರಾ ಮತ್ತು ಆರ್.ಆರ್.ನಗರ ಉಪಚುನಾವಣೆ ಯಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಡಾ. ರಾಜೇಶ್ ಗೌಡ ಮತ್ತು ಮುನಿರತ್ನ ಅವರ ಭರ್ಜರಿ ವಿಜಯ ಪ್ರಜಾಪ್ರಭುತ್ವದ ಗೆಲುವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಈ ಗೆಲುವು ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರ ಜನಪರ ಆಡಳಿತ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುರ್ಮಾ ಕಟೀಲ್‌ರ ಸಂಘಟನಾ ಚಾತುರ್ಯಕ್ಕೆ ಸಂದ ಗೌರವ. ಮಾತ್ರವಲ್ಲದೆ ರಾಜ್ಯ ಸರಕಾರ ಅಭಿವೃದ್ಧಿ ಕೆಲಸ ಕಾರ್ಯಗಳ ಜೊತೆಗೆ ಕೊರೋನಾ ಮಹಾಮಾರಿ ಮತ್ತು ನೆರೆ ಹಾವಳಿಯ ಸಂಕಷ್ಟವನ್ನು ಸಮರ್ಥವಾಗಿ ನಿಭಾಯಿಸಿ ಜನತೆಯ ವಿಶ್ವಾಸ ಗಳಿಸಿರುವುದ್ದಕ್ಕೆ ಸಾಕ್ಷಿ ಯಾಗಿದೆ ಎಂದವರು ಹೇಳಿಕೆ ಯಲ್ಲಿ ತಿಳಿಸಿದ್ದಾರೆ.

ರಾಜ್ಯದ ಜನತೆ ಕೇವಲ ಅಭಿವೃದ್ಧಿ ಹಾಗೂ ಜನಪರ ಆಡಳಿತಕ್ಕೆ ಮಾತ್ರ ಬೆಲೆ ನೀಡುತ್ತಾರೆ ಎಂಬುದು ಈ ಚುನಾವಣಾ ಫಲಿತಾಂಶದಿಂದ ಮತ್ತೊಮ್ಮೆ ಸಾಬೀತಾಗಿದೆ. ಕಾಂಗ್ರೆಸ್ ಒಡೆದ ಮನೆಯಂತಾಗಿದ್ದು, ನಾಯಕರೊಳಗಿನ ಬಿನ್ನಮತ ಈ ಫಲಿತಾಂಶದ ಮೂಲಕ ಇನ್ನಷ್ಟು ಸ್ಪಷ್ಟಗೊಂಡಿದೆ ಎಂದು ಸುರೇಶ್ ನಾಯಕ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News