ಕಾರು-ಟಿಪ್ಪರ್ ಮುಖಾಮುಖಿ ಢಿಕ್ಕಿ: ಕೆಎಂಸಿ ವೈದ್ಯರಿಗೆ ಗಂಭೀರ ಗಾಯ

Update: 2020-11-11 15:38 GMT

ಹಿರಿಯಡ್ಕ, ನ.11: ಕಾರು ಮತ್ತು ಟಿಪ್ಪರ್ ನಡುವೆ ನಡೆದ ಮುಖಾಮುಖಿ ಢಿಕ್ಕಿಯಲ್ಲಿ ಮಣಿಪಾಲ ಕೆಎಂಸಿಯ ವೈದ್ಯರೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಹಿರಿಯಡ್ಕದ ಗಂಪಾ ಕ್ರಾಸ್ ಬಳಿ ಇಂದು ಅಪರಾಹ್ನ ನಡೆದಿದೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಮಣಿಪಾಲ ಕೆಎಂಸಿಯ ವೈದ್ಯ ಡಾ.ವಿಜಯಕುಮಾರ್ (31) ಎಂದು ಗುರುತಿಸಲಾಗಿದೆ. ಇವರು ಮಣಿಪಾಲದಿಂದ ಕಾರ್ಕಳದತ್ತ ಕಾರು ಚಲಾಯಿಸಿಕೊಂಡು ಹೋಗುತಿದ್ದಾಗ ಅಪರಾಹ್ನ 2:30ರ ಸುಮಾರಿಗೆ ಗಂಪಾ ಕ್ರಾಸ್ ಬಳಿ ಎದುರಿನಿಂದ ಬರುತಿದ್ದ ಟಿಪ್ಪರ್ ವೇಗವಾಗಿ ಬಂದು ಕಾರಿಗೆ ಡಿಕ್ಕಿ ಹೊಡೆದಿತ್ತು.

ಇದರಿಂದ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ವೈದ್ಯರನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News