ಕಾಸರಗೋಡು : ವಂಚನೆ ಪ್ರಕರಣ; ಶಾಸಕ ಕಮರುದ್ದೀನ್ ಅರ್ಜಿ ವಜಾ

Update: 2020-11-12 06:40 GMT

ಕಾಸರಗೋಡು : ಫ್ಯಾಶನ್  ಗೋಲ್ಡ್ ಠೇವಣಿ ವಂಚನೆ ಪ್ರಕರಣದ ಆರೋಪಿ ಮಂಜೇಶ್ವರ ಶಾಸಕ  ಎಂ.ಸಿ ಕಮರುದ್ದೀನ್  ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೊಸದುರ್ಗ ಮೇಜಿಸ್ಟ್ರೇಟ್ ನ್ಯಾಯಾಲಯ  ತಿರಸ್ಕರಿಸಿದೆ.

ಕಮರುದ್ದೀನ್ ಸಲ್ಲಿಸಿದ್ದ ಅರ್ಜಿಯನ್ನು ಇಂದು ಬೆಳಗ್ಗೆ ವಿಚಾರಣೆಗೆ  ಕೈಗೆತ್ತಿಕೊಂಡಿತ್ತು. ಕಮರುದ್ದೀನ್ ವಿರುದ್ಧದ  ಕೇಸು ರದ್ದುಗೊಳಿಸಲು ಸಾಧ್ಯ ಇಲ್ಲ . ಕಮರುದ್ದೀನ್ ವಂಚನೆಯ ಮುಖ್ಯ ಸೂತ್ರಧಾರ  ಎಂದು ಪೊಲೀಸರು  ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿದೆ.

ವಂಚನೆಗೆ ಸಂಬಂಧಪಟ್ಟಂತೆ ಈಗಾಗಲೇ  128 ರಷ್ಟು ಕೇಸುಗಳು ದಾಖಲಿಸಲಾಗಿದ್ದು, ಪ್ರಕರಣದಿಂದ ಮುಕ್ತಗೊಳಿಸುವಂತೆ ಕಮರುದ್ದೀನ್ ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News