'ಸಮಕಾಲೀನ ಸಮಸ್ಯೆಗಳಿಗೆ ಪ್ರವಾದಿ ಚರ್ಯೆ ಪರಿಹಾರ' : ರಾಜ್ಯ ಫೈಝೀಸ್ ರಬೀಹ್ ಕ್ಯಾಂಪೈನ್‌

Update: 2020-11-13 15:25 GMT

ಬಿ.ಸಿ.ರೋಡ್ :  ಪೈಝೀಸ್ ಅಸೋಸಿಯೇಷನ್ ರಾಜ್ಯ ಸಮಿತಿಯು ಅಕ್ಟೋಬರ್ 19 ರಿಂದ ನವೆಂಬರ್ 14 ರವರೆಗೆ ಪುಣ್ಯ ಪ್ರವಾದಿಯ ಜನ್ಮ ದಿನದ ಅಂಗವಾಗಿ ಹಮ್ಮಿಕೊಂಡ ಸಮಕಾಲೀನ ಸಮಸ್ಯೆಗಳಿಗೆ ಪ್ರವಾದಿ ಚರ್ಯೆ ಪರಿಹಾರ ಎಂಬ ಕೇಂದ್ರೀಯ ವಿಷಯದ ರಬೀಹ್ ಕ್ಯಾಂಪೈನ್ ನ ಸಮಾರೋಪ ಕಾರ್ಯಕ್ರಮವು ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಪ್ರಸಿದ್ಧ ಆಧ್ಯಾತ್ಮಿಕ ಸಂದರ್ಶನ ಕೇಂದ್ರವಾದ ಫತ್ಹುಲ್ಲಾಹಿಶಾಹ್ ಖಾದ್ರಿ ದರ್ಗಾ ಸಮೀಪ ನ.14 ರಂದು ನಡೆಯಲಿದೆ.

ಕಾರ್ಯಕ್ರಮವು ಮಖಾಂ ಝಿಯಾರತ್ ನೊಂದಿಗೆ ಪ್ರಾರಂಭಗೊಳ್ಳಲಿದ್ದು ಝಿಯಾರತ್ ನೇತೃತ್ವ ಹಾಗೂ ಕಾರ್ಯಕ್ರಮದ ಉದ್ಘಾಟನೆಯನ್ನು  ಸಯ್ಯದ್ ಅಲಿ ತಂಙಲ್ ನೆರವೇರಿಸಲಿದ್ದಾರೆ.

ರಾಜ್ಯ ಫೈಝೀಸ್ ಅಧ್ಯಕ್ಷ ಉಸ್ಮಾನ್ ಫೈಝಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಬೆಳ್ತಂಗಡಿ ಜಿಫ್ರಿ ತಂಙಳ್ ಮೌಲಿದ್ ಮಜ್ಲಿಸಿನ ನೇತೃತ್ವವನ್ನು ವಹಿಸಲಿದ್ದು ಉತ್ತರ ಕನ್ನಡ ಜಿಲ್ಲಾ ಖಾಝಿ ಇಶ್ತಿಕೇ ಅಹ್ಮದ್ ಖಾನ್ ಮುಫ್ತಿ ರವರು ಮದ್ಹುರ್ರಸೂಲ್ ಪ್ರಭಾಷಣ ಮಾಡಲಿದ್ದಾರೆ.

ಶೇಕ್ ಮುಹಮ್ಮದ್ ಫೈಝಿ, ಝುಬೈರ್ ಫೈಝಿ, ಅಬ್ದುಲ್ ಕರಿಂ ಫೈಝಿ, ಸಿರಾಜುದ್ದೀನ್ ಫೈಝಿ ಮೊದಲಾದವರು ಉರ್ದು, ಮಲೆಯಾಳಂ, ಕನ್ನಡ  ದಲ್ಲಿ ಸಂದೇಶ ನೀಡಲಿದ್ದಾರೆ. ಅಲ್ಲದೆ ಇನ್ನಿತರ ಉಲಮಾ ಉಮರ  ಪ್ರಮುಖರೂ ಸಾಮಾಜಿಕ, ಶೈಕ್ಷಣಿಕ ರಂಗದ ಮೇಧಾವಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ರಾಜ್ಯ ಫೈಝೀಸ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಫೈಝಿ ಮಿತ್ತಬೈಲು ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News