ಗುಡ್ಡೆಅಂಗಡಿ ನೂರುದ್ದೀನ್ ಮದ್ರಸ ಕಟ್ಟಡ ಉದ್ಘಾಟನೆ

Update: 2020-11-18 05:15 GMT

ಬಂಟ್ವಾಳ, ನ.18: ಇಲ್ಲಿನ ಪಾಣೆಮಂಗಳೂರು ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿಯ ನೂರುದ್ದೀನ್ ಮದ್ರಸ ಕಟ್ಟಡ ಉದ್ಘಾಟನಾ ಸಮಾರಂಭ ನಡೆಯಿತು.

ಕರ್ನಾಟಕ ಮುಶಾವರ ಜಮೀಯತುಲ್ ಉಲಮಾದ ಅಧ್ಯಕ್ಷ ಎನ್.ಪಿ.ಎಂ. ಝೈನುಲ್ ಅಬಿದೀನ್ ತಂಙಳ್ ಕುನ್ನುಂಗೈ ಉದ್ಘಾಟಿಸಿದರು. 

ಬಂಟ್ವಾಳ ವಲಯ ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಇರ್ಷಾದ್ ದಾರಿಮಿ ದುಅ ಆಶೀರ್ವಚನ ನೀಡಿದರು. ಗುಡ್ಡೆಅಂಗಡಿ ಎನ್.ಜೆ.ಎಂ. ಅಧ್ಯಕ್ಷ ಹಾಜಿ ಎಸ್.ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಪುರಸಭೆಯ ನೂತನ ಅಧ್ಯಕ್ಷ ಶರೀಫ್ ಹಾಗೂ ಮಾಜಿ ಸಚಿವ ಬಿ.ರಮಾನಾಥ ರೈ ಅವರನ್ನು ಸನ್ಮಾನಿಸಲಾಯಿತು. ಮದರಸ ಕಟ್ಟಡದ ಇಂಜಿನಿಯರ್ ಮಲಿಕ್ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. 

ಮದ್ರಸ ಉಸ್ತಾದ್ ಮುಹಮ್ಮದ್ ಶರೀಫ್ ಮೌಲವಿ ಪರಪ್ಪು, ಇಸ್ಮಾಯಿಲ್ ಯಮಾನಿ, ಹಾಜಿ ಬಿ.ಎ.ಮುಹಮ್ಮದ್ ನೀಮಾ, ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದಿಕ್ ಗುಡ್ಡೆಅಂಗಡಿ, ಪಕೀರ್ ಹಾಜಿ, ಲತೀಫ್ ದುಲ್ಫುಖಾರ್, ಹಮೀದ್ ಹಾಜಿ, ಅಬ್ದುಲ್ ಹಮೀದ್, ಮಾಸ್ಟರ್ ಸುಲೈಮಾನ್ ಹಾಜಿ ಮೊದಲಾದವರು ಉಪಸ್ಥಿತರಿದ್ದರು.

ಗುಡ್ಡೆಅಂಗಡಿ ಎನ್.ಜೆ.ಎಂ. ಖತೀಬು ರಶೀದ್ ಯಮಾನಿ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಉಮ್ಮರ್ ಫಾರೂಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News