×
Ad

ಯೂಟ್ಯೂಬರ್ ವಿರುದ್ಧ 500 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ ನಟ ಅಕ್ಷಯ್ ಕುಮಾರ್

Update: 2020-11-19 17:01 IST

ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದಲ್ಲಿ ನಕಲಿ ಸುದ್ದಿ ಹರಡುವಾಗ ತಮ್ಮ ಹೆಸರನ್ನು ಎಳೆದು ತಂದ ಯುಟ್ಯೂಬರ್ ರಶೀದ್ ಸಿದ್ದೀಖಿ ವಿರುದ್ಧ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ರೂ. 500 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತವರ ಪುತ್ರ ಹಾಗೂ ಸಚಿವ ಆದಿತ್ಯ ಠಾಕ್ರೆ ಹೆಸರನ್ನೂ ಈ ಪ್ರಕರಣದಲ್ಲಿ ಎಳೆದು ತಂದಿದ್ದಕ್ಕಾಗಿ ಈ ಹಿಂದೆ ಸಿದ್ದೀಖಿಯನ್ನು ಪೊಲೀಸರು ಬಂಧಿಸಿದ್ದರು.

ರಶೀದ್ ತಮ್ಮ ವೀಡಿಯೋದಲ್ಲಿ ಅಕ್ಷಯ್ ಅವರ ಹೆಸರನ್ನು ಹಲವು ಬಾರಿ ಉಲ್ಲೇಖಿಸಿದ್ದರಲ್ಲದೆ ವಿವಿಧ ಆರೋಪಗಳನ್ನೂ ಹೊರಿಸಿದ್ದರು. ಸುಶಾಂತ್‍ಗೆ 'ಎಂ ಎಸ್ ಧೋನಿ: ದಿ ಅನ್‍ಟೋಲ್ಡ್ ಸ್ಟೋರಿ'ಯಂತಹ ಪ್ರಮುಖ ಚಿತ್ರಗಳು ದೊರಕುತ್ತಿದ್ದುದರಿಂದ ಅಕ್ಷಯ್ ನಿರಾಸೆಗೊಂಡಿದ್ದರು ಎಂದು ಸಿದ್ದೀಖಿ ಆರೋಪಿಸಿದ್ದರಲ್ಲದೆ ಅಕ್ಷಯ್ ಅವರು ಆದಿತ್ಯ ಠಾಕ್ರೆ ಮತ್ತು ಮುಂಬೈ ಪೊಲೀಸರ ಜತೆ ರಹಸ್ಯ ಸಭೆಗಳನ್ನೂ ನಡೆಸಿದ್ದರೆಂದು ಆಪಾದಿಸಿದ್ದರು.

ಬಿಹಾರ ಮೂಲದ ಸಿವಿಲ್ ಇಂಜಿನಿಯರ್ ಆಗಿರುವ ಸಿದ್ದೀಖಿ, ತನ್ನ ಒಂದು ವೀಡಿಯೋದಲ್ಲಿ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿಗೂ ಅಕ್ಷಯ್‍ಗೂ ನಂಟು ಕಲ್ಪಿಸಿದ್ದರಲ್ಲದೆ ರಿಯಾಗೆ ಕೆನಡಾಗೆ ಪರಾರಿಯಾಗಲು ಸಹಾಯ ಮಾಡಿದ್ದರೆಂದು ಹೇಳಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News