ಮಂಗಳೂರು ಸೌಹಾರ್ದ ಸಹಕಾರಿ ನಿಯಮಿತದ ದಶಮಾನೋತ್ಸವ ಸಂಭ್ರಮ

Update: 2020-11-23 05:36 GMT

ಮಂಗಳೂರು, ನ.23: ಮಂಗಳೂರು ಸೌಹಾರ್ದ ಸಹಕಾರಿ ನಿಯಮಿತದ ದಶಮಾನೋತ್ಸವ ಸಂಭ್ರಮಾಚರಣೆ ಹಾಗೂ 10ನೇ ಮಹಾಸಭೆ ಕಾರ್ಯಕ್ರಮ ರವಿವಾರ ಜೆಪ್ಪುವಿನಲ್ಲಿರುವ ಸಂಸ್ಥೆಯ ಕಚೇರಿ ಆವರಣದಲ್ಲಿ ಜರುಗಿತು.

ಮಾಜಿ ಕಾರ್ಪೊರೇಟರ್ ಕೆ.ಭಾಸ್ಕರ್ ರಾವ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಐವನ್ ಡಿಸೋಜ, ಎಂಸಿಸಿ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ನೋಟರಿ ಶ್ರೀರಾಘವೇಂದ್ರ ರಾವ್, ವಿಕಾಸ್ ಕಾಲೇಜಿನ ಟ್ರಸ್ಟಿ ಜೆ.ಕೊರಗಪ್ಪ, ಪ್ರಭು ಸ್ವೀಟ್ಸ್‌ನ ಶಿವಾನಂದ ಪ್ರಭು, ಯೆನ್‌ಮಾರ್ಕ್ ಬಿಲ್ಡರ್ಸ್‌ನ ನೂರ್ ಮುಹಮ್ಮದ್ ಭಾಗವಹಿಸಿದ್ದರು.

ಇದೇ ಸಂದರ್ಭ ನಿವೃತ್ತ ಶಿಕ್ಷಕಿ ಹೆಲನ್ ಮತ್ತು ಅಂತಾರಾಷ್ಟ್ರೀಯ ಕ್ರೀಡಾಪಟು ಶುಭಾ ಪ್ರಶಾಂತ್ ಹಾಗೂ ಸಂಸ್ಥೆಯ ನಿತ್ಯನಿಧಿ ಸಂಗ್ರಾಹಕ ವಸಂತ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ದಶಮಾನೋತ್ಸವದ ಪ್ರಯುಕ್ತ ಅರ್ಹರಿಗೆ ವೈದ್ಯಕೀಯ ನೆರವು ವಿತರಿಸಲಾಯಿತು.

ಇದೇ ಸಂದರ್ಭ 10 ವರ್ಷವೂ ಸಂಸ್ಥೆಯ ಮಹಾಸಭೆಗೆ ಹಾಜರಾದ ಮತ್ತು 10 ವರ್ಷ ವ್ಯವಹಾರ ಮಾಡಿರುವ ಸಹಕಾರಿಯ ಸದಸ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಗೌರಿ ರಾಧಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಉಪಾಧ್ಯಕ್ಷ ಕೃಷ್ಣ ಭಟ್, ನಿರ್ದೇಶಕರಾದ ಕೆ.ವಿಜೇತಾ, ಲತಾ ಆಳ್ವ, ಸುಪ್ರೀತ್ ಜೆ.ಕೆ., ಸುಂದರ ಸಾಲ್ಯಾನ್, ರಾಮಮೋಹನ್, ರತನ್ ಕುಮಾರ್ ಮತ್ತು ಚಂದ್ರಿಕಾ ಡಿ. ರಾವ್, ಶೋಭಾರಾಣಿ, ಶ್ರೀದೇವಿ, ವಿಕ್ಟೋರಿಯಾ, ರಾಧಾಕೃಷ್ಣ, ಕುಸುಮಾ ರೈ, ನಾಗಪ್ರಭಾ, ಪೂರ್ಣಿಮಾ ಬಿ. ರಾವ್ ಉಪಸ್ಥಿತರಿದ್ದರು.

ನಿರ್ದೇಶಕ ಸದಾಶಿವ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News