ಎಸ್ಕೆಎಸ್ಸೆಸ್ಸೆಫ್ ತ್ವಲಬಾ ವಿಂಗ್ ಬೆಳ್ತಂಗಡಿ ವಲಯಕ್ಕೆ ಪದಾಧಿಕಾರಿಗಳ ಆಯ್ಕೆ

Update: 2020-11-23 05:42 GMT

ಬೆಳ್ತಂಗಡಿ, ನ.23: ಎಸ್ಕೆಎಸ್ಸೆಸ್ಸೆಫ್ ಬೆಳ್ತಂಗಡಿ ವಲಯವು ಬೆಳ್ತಂಗಡಿ ದಾರುಸ್ಸಲಾಂ ವಠಾರದಲ್ಲಿ ಶನಿವಾರ ಆಯೋಜಿಸಿದ ತನ್ಶೀತ್ ಕಾರ್ಯಕ್ರಮದಲ್ಲಿ ಎಸ್ಕೆಎಸ್ಸೆಸ್ಸೆಫ್ ತ್ವಲಬಾ ವಿಂಗ್ ಬೆಳ್ತಂಗಡಿ ವಲಯದ 2020-22ನೇ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಗೌಸ್ ಮುಹಿಯುದ್ದೀನ್ ಚಾರ್ಮಾಡಿ, ಉಪಾಧ್ಯಕ್ಷರಾಗಿ ಶಿಹಾಬುದ್ದೀನ್ ಕಕ್ಕಿಂಜೆ, ಅಬ್ದುಲ್ಲಾಹಿ ನವಾಝ್ ಶರೀಫ್ ಬಂಗೇರಕಟ್ಟೆ, ಕಾರ್ಯದರ್ಶಿಯಾಗಿ ಮುಹಮ್ಮದ್ ಯೂನುಸ್ ಪಾಂಡವರಕಲ್ಲು, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ಫತ್ತಾಹ್ ಗೇರುಕಟ್ಟೆ, ಮುಹಮ್ಮದ್ ಸಫ್ವಾನ್ ಕನ್ನಡಿಕಟ್ಟೆ, ಕೋಶಾಧಿಕಾರಿಯಾಗಿ ಮುಹಮ್ಮದ್ ಅಲ್ತಾಫ್ ಕನ್ನಡಿಕಟ್ಟೆ, ವರ್ಕಿಂಗ್ ಕಾರ್ಯದರ್ಶಿಯಾಗಿ ಶಂಸೀರ್ ಅಹ್ಮದ್ ಚಾರ್ಮಾಡಿ, ಮೀಡಿಯಾ ವಿಂಗ್ ಸದಸ್ಯರಾಗಿ ಮುಹಮ್ಮದ್ ಅರ್ಶದ್ ಕಕ್ಕಿಂಜೆ, ಶರೀಫ್ ಇಸ್ಲಾಂಬಾದ್ ಚಾರ್ಮಾಡಿ ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಹಮ್ಮದ್ ಮುಬಶ್ಶಿರ್ ಕಾಜೂರು, ಮುಹಮ್ಮದ್ ಆರಿಫ್ ಇಸ್ಲಾಂಬಾದ್ ಚಾರ್ಮಾಡಿ, ಮುಹಮ್ಮದ್ ಸಫ್ವಾನ್ ಗೇರುಕಟ್ಟೆ, ಮುಹಮ್ಮದ್ ರಾಝಿಕ್ ಕನ್ನಡಿಕಟ್ಟೆ, ಶಿಹಾಬುದ್ದೀನ್ ಕಿಲ್ಲೂರು, ಮುಹಮ್ಮದ್ ಹಾರಿಸ್ ಕಕ್ಕಿಂಜೆ, ಮುಹಮ್ಮದ್ ಶಕೀಲ್ ಕನ್ನಡಿಕಟ್ಟೆ, ಮುಹಮ್ಮದ್ ಆಸಿಫ್ ಕನ್ನಡಿಕಟ್ಟೆ ಆಯ್ಕೆಯಾದರು.

ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿಯ ಕಾರ್ಯದರ್ಶಿ ಸತ್ತಾರ್ ಪಂದಲ್ಲೂರು ನೂತನ ಅಧ್ಯಕ್ಷರಿಗೆ ಪುಸ್ತಕ ಹಸ್ತಾಂತರಿಸುವ ಮೂಲಕ ನೂತನ ಸಮಿತಿಗೆ ಚಾಲನೆ ನೀಡಿದರು.

ವೇದಿಕೆಯಲ್ಲಿ ವಲಯಾಧ್ಯಕ್ಷ ನಝೀರ್ ಅಝ್ಹರಿ ಬೊಳ್ಮಿನಾರ್, ಕಾರ್ಯದರ್ಶಿ ರಿಯಾಝ್ ಫೈಝಿ ಕಕ್ಕಿಂಜೆ, ರಝಾಕ್ ದರ್ಸಿ ಗೇರುಕಟ್ಟೆ, ಹಾಶಿಂ ಫೈಝಿ ಪಾಂಡವರಕಲ್ಲು, ಅಬ್ಬಾಸ್ ಫೈಝಿ ದಿಡುಪೆ, ಹನೀಫ್ ಧೂಮಳಿಕೆ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News