ದ.ಕ. ಜಿಲ್ಲಾ ಕಾಂಗ್ರೆಸ್ ಕೋವಿಡ್ 19 ಹೆಲ್ಪ್‌ಲೈನ್ ಘಟಕದಿಂದ 10 ಮಂದಿಗೆ ತಳ್ಳುಗಾಡಿ

Update: 2020-11-27 09:08 GMT

ಮಂಗಳೂರು, ನ.27:ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕೋವಿಡ್ 19 ಹೆಲ್ಪ್‌ಲೈನ್ ಘಟಕದಿಂದ ಸುಮಾರು 10 ಮಂದಿಗೆ ತಳ್ಳುಗಾಡಿಯನ್ನು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ವಿತರಿಸಿದರು.

ಹೆಲ್ಪ್‌ಲೈನ್ ಘಟಕದ ಸಂಚಾಲಕ ಐವನ್ ಡಿಸೋಜ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರ ನಿರ್ದೇಶನದಂತೆ ಕೋವಿಡ್ ಹೆಲ್ಪ್‌ಲೈನ್ ರಚಿಸಿ ನಾನಾ ರೀತಿ ಆರೋಗ್ಯ ಸೇವೆ, ಸಾಮಾಜಿಕ ಸೇವೆಯನ್ನು ಮಾಡಿಕೊಂಡು ಬಂದಿದೆ. ಇದೇ ಘಟಕದಿಂದ ಇದೀಗ ಬೀದಿ ಬದಿ ವ್ಯಾಪಾರ ಮಾಡುತ್ತಿರುವ 10ಮಂದಿಗೆ ತಳ್ಳುಗಾಡಿಯನ್ನು ವಿತರಿಸಲಾಗುತ್ತಿದೆ. ಇದರ ಪ್ರಾಯೋಜಕತ್ವವನ್ನು ಘಟಕದ ಸದಸ್ಯ ವಿವೇಕ್ ರಾಜ್ ವಹಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮನಪಾ ಮಾಜಿ ಉಪಮೇಯರ್ ಮಹಮ್ಮದ್ ಕುಂಜತ್‌ಬೈಲ್, ಮಾಜಿ ಮೇಯರ್ ಶಶಿಧರ್ ಹೆಗ್ಡೆಘಿ, ಮಾಜಿ ಉಪಮೇಯರ್ ರಜನೀಶ್ ಕಾಪಿಕಾಡ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್‌ದಾಸ್, ಶುಭೋದಯ ಆಳ್ವಘಿ, ವಿವೇಕ್ ರಾಜ್ ಪೂಜಾರಿ, ಸಾಹುಲ್ ಹಮೀದ್, ನಝೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News