ರೈತರ ಮೇಲೆ ಪ್ರಯೋಗಿಸುತ್ತಿದ್ದ ಜಲಫಿರಂಗಿಯನ್ನು ತಡೆದ ಯುವಕನ ವಿರುದ್ಧ ಕೊಲೆಯತ್ನ ಪ್ರಕರಣ

Update: 2020-11-27 17:54 GMT

ಹೊಸದಿಲ್ಲಿ: ಕೇಂದ್ರ ಸರಕಾರದ ಕೃಷಿ ನೀತಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಪ್ರಯೋಗಿಸಿದ ಜಲಫಿರಂಗಿಯನ್ನು ತಡೆದು ಸಾಹಸ ಮೆರೆದ ಯುವಕನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.

ರೈತರ ಮೇಲೆ ಪ್ರಯೋಗಿಸಲಾಗುತ್ತಿದ್ದ ಜಲಫಿರಂಗಿಯಿದ್ದ ವಾಹನವನ್ನು ಏರಿದ್ದ 26 ವರ್ಷದ ಯುವಕ ನವದೀಪ್ ಸಿಂಗ್ ಜಲಫಿರಂಗಿಯನ್ನು ನಿಲ್ಲಿಸಿದ್ದ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ನವದೀಪ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.

ಕೃಷಿ ಸಂಘಟನೆಯೊಂದರ ಮುಖ್ಯಸ್ಥರ ಪುತ್ರನಾಗಿರುವ ನವದೀಪ್ ವಿರುದ್ಧ ಗಲಭೆ ಮತ್ತು ಕೋವಿಡ್ 19 ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News