ತಲೆಮರೆಸಿಕೊಂಡಿದ್ದ ಹಳೆ ಆರೋಪಿ ಬಂಧನ

Update: 2020-11-28 15:25 GMT

ಕುಂದಾಪುರ, ನ.28: ಪ್ರಕರಣವೊಂದಕ್ಕೆ ಸಂಂಧಿಸಿ ಕಳೆದ 16 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಹಳೆ ಆರೋಪಿಯನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಕಂಡ್ಲೂರಿನ ನಿವಾಸಿ ಯಾಸಿನ್ ಬಿ. ಬಂಧಿತ ಆರೋಪಿ. ಆತನನ್ನು ಕುಂದಾಪುರ ವೃತ್ತನಿರೀಕ್ಷಕ ಗೋಪಿಕೃಷ್ಣ ಕೆ.ಆರ್. ಮಾರ್ಗದರ್ಶ ನದಲ್ಲಿ, ಎಸ್ಸೈ ರಾಜಕುಮಾರ್ ಹಾಗೂ ಅಪರಾಧ ಪತ್ತೆ ವಿಭಾಗದ ಎಸ್ಸೈ ಸುಧಾ ಪ್ರಭು ಯು. ನಿರ್ದೇಶನದಲ್ಲಿ ಎಎಸ್ಸೈ ರವೀಶ ಹೊಳ್ಳ ಮುತುವರ್ಜಿಯಲ್ಲಿ ಸಿಬ್ಬಂದಿಗಳಾದ ಸತೀಶ್ ಬೆಳ್ಳೆ, ನಾಗೇಶ್, ಅನಿಲ್ ಕುಮಾರ್ ಬಿ.ಎಸ್., ಚಿದಾನಂದ ಎಚ್.ಪಿ. ಪತ್ತೆ ಹಚ್ಚಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News