ಪ್ರತಿಭಾವಂತ ವಿದ್ಯಾರ್ಥಿನಿ ಸುಶ್ಮಿತ ಕನ್ನರ್ಪಾಡಿಗೆ ಸನ್ಮಾನ

Update: 2020-11-30 09:03 GMT

 ಉಡುಪಿ, ನ.30: ಮಂಗಳೂರು ವಿಶ್ವ ವಿದ್ಯಾನಿಲಯದ ಅಂತಿಮ ಬಿಸಿಎ ಪದವಿ ಪರೀಕ್ಷೆಯಲ್ಲಿ ಶೇ.99.25 ಅಂಕ ಗಳಿಸಿ ಅತ್ಯುತ್ತಮ ದರ್ಜೆಯಲ್ಲಿ ಉತ್ತೀರ್ಣರಾದ ಕಿನ್ನಿಮುಲ್ಕಿ ಲೇಬರ್ ಕಾಲೋನಿಯ ಸಂಪ ಹಾಗೂ ದಯಾ ನಂದ ದಂಪತಿಯ ಪುತ್ರಿ ಸುಶ್ಮಿತ ಕನ್ನರ್ಪಾಡಿ ಅವನ್ನು ರವಿವಾರ ಸನ್ಮಾನಿಸ ಲಾಯಿತು.

ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಸುಶ್ಮಿತ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಸೋಮಪ್ಪ ಮೇಸ್ತ್ರಿ ಕುತ್ಪಾಡಿ, ಜಿಲ್ಲಾ ಎಸ್‌ಸಿ ಮೋರ್ಚಾ ಕಾರ್ಯದರ್ಶಿ ಸುಧಾಕರ, ಶಂಕರ್, ನಗರ ಎಸ್‌ಸಿ ಮೋರ್ಚಾ ಅಧ್ಯಕ್ಷ ಕಿರಣ್ ಕುತ್ಪಾಡಿ, ಉಪಾಧ್ಯಕ್ಷ ಕೀರ್ತನ್ ಕಿನ್ನಿಮುಲ್ಕಿ, ಸಂತೋಷ್ ಕಿನ್ನಿಮುಲ್ಕಿ, ಸಂಜಯ್ ಕುಮಾರ್ ಕಿನ್ನಿಮುಲ್ಕಿ, ಪ್ರಶಾಂತ್, ಸದಾಶಿವ, ಅರುಣ್, ಪ್ರಥಮ್, ಅವಿನಾಶ್, ರಂಜಿತ್, ಅಭಿಜಿತ್ ಮೊದ ಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News