ರೈತ ಸಂಘಟನೆಯೊಂದಿಗೆ ನಿರ್ಣಾಯಕ ಸಭೆಯ ಮೊದಲು ಅಮಿತ್ ಶಾ-ಅಮರಿಂದರ್ ಸಿಂಗ್ ಭೇಟಿ?
Update: 2020-12-02 16:46 GMT
ಹೊಸದಿಲ್ಲಿ: ದಿಲ್ಲಿಯ ಸುತ್ತಮುತ್ತ ತೀವ್ರ ಪ್ರತಿಭಟನೆಯಲ್ಲಿ ತೊಡಗಿರುವ ರೈತರ ಸಂಘಟನೆಯೊಂದಿಗೆ ಗುರುವಾರ ಎರಡನೇ ಸುತ್ತಿನ ನಿರ್ಣಾಯಕ ಸಭೆಯ ಮೊದಲು ಗೃಹ ಸಚಿವ ಅಮಿತ್ ಶಾ ಅವರು ಬೆಳಗ್ಗೆ 9:30ರ ಸುಮಾರಿಗೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರನ್ನು ಭೇಟಿಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಕೃಷಿ ಕಾಯಿದೆಯ ಕುರಿತ ಗೊಂದಲವನ್ನು ನಿವಾರಿಸಲು ಸಮಿತಿ ರಚಿಸುವ ಕೇಂದ್ರದ ಪ್ರಸ್ತಾವವನ್ನು ಮಂಗಳವಾರ ನಡೆದ ಸಭೆಯಲ್ಲಿ ರೈತ ಸಂಘಟನೆಗಳು ತಿರಸ್ಕರಿಸಿದ್ದವು.
"ಕೃಷಿ ಕಾನೂನುಗಳ ಕುರಿತು ನಿರ್ಧಾರ ಕೈಗೊಳ್ಳಲು ಕೇಂದ್ರ ಸರಕಾರಕ್ಕೆ ನಾಳೆ ಕೊನೆಯ ಅವಕಾಶವಾಗಿದೆ. ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಆಂದೋಲನ ಹೆಚ್ಚಾಗಲಿದ್ದು, ಸರಕಾರವೇ ಬೀಳಲಿದೆ'' ಎಂದು ಲೋಕಸಂಘರ್ಷ ಮೋರ್ಚಾದ ಪ್ರತಿಭಾ ಶಿಂಧೆ ಎಚ್ಚರಿಕೆ ನೀಡಿದ್ದಾರೆ.