ಕೊರೋನದಿಂದ ಮೃತಪಟ್ಟ ಪತ್ರಕರ್ತರನ್ನೂ ‘ಕೋವಿಡ್ ವಾರಿಯರ್’ ಎಂದು ಪರಿಗಣಿಸಿ: ಪಿಸಿಐ

Update: 2020-12-03 14:56 GMT

ಹೊಸದಿಲ್ಲಿ, ಡಿ. 3: ‘ಕೋವಿಡ್ ವಾರಿಯರ್’ ವರ್ಗದಲ್ಲಿ ಕೋವಿಡ್-19ನಿಂದ ಮೃತಪಟ್ಟ ಪತ್ರಕರ್ತರನ್ನು ಕೂಡ ಸೇರಿಸುವಂತೆ ಹಾಗೂ ಅವರಿಗೆ ಎಲ್ಲಾ ಸೌಲಭ್ಯಗಳನ್ನು ನೀಡುವಂತೆ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯ (ಪಿಸಿಐ) ಕೇಂದ್ರ ಸರಕಾರವನ್ನು ಆಗ್ರಹಿಸಿದೆ.

ಕೇಂದ್ರ ಸರಕಾರ, ಎಲ್ಲಾ ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ರವಾನಿಸಿರುವ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ಹರ್ಯಾಣ ಸರಕಾರ ಈಗಾಗಲೇ ರೂಪಿಸಿದ ಯೋಜನೆಯಂತೆ ಪತ್ರಕರ್ತರಿಗೆ ಗುಂಪು ವಿಮಾ ಯೋಜನೆ ರೂಪಿಸುವಂತೆ ಹಾಗೂ ಅನುಷ್ಠಾನಗೊಳಿಸುವಂತೆ ಆಗ್ರಹಿಸಿದೆ. ಇದಲ್ಲದೆ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಎಲ್ಲ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ರವಾನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News