ರೈತರ ಪ್ರತಿಭಟನೆಗೆ ಜಸ್ಟಿನ್ ಟ್ರೂಡೊ ಹೇಳಿಕೆ: ಕೆನಡಾ ಹೈಕಮಿಶನರ್ ಗೆ ಭಾರತ ಸಮನ್ಸ್

Update: 2020-12-04 10:02 GMT

ಹೊಸದಿಲ್ಲಿ: ದಿಲ್ಲಿಯಲ್ಲಿ ಈಗ ನಡೆಯುತ್ತಿರುವ ರೈತರ ಪ್ರತಿಭಟನೆಯ ಕುರಿತು ಪ್ರಧಾನಮಂತ್ರಿ ಜಸ್ಟಿನ್ ಟ್ರೂಡೊಸಹಿತ ಕೆನಡಾದ ಸಂಸದರು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಭಾರತವು ಶುಕ್ರವಾರ  ಕೆನಡಾದ ಹೈಕಮಿಶನರ್ ಗೆ ಸಮನ್ಸ್ ನೀಡಿದೆ. ರೈತರ ಪ್ರತಿಭಟನೆಯ ಕುರಿತ ಹೇಳಿಕೆಯು ಉಭಯ ದೇಶಗಳ ಬಾಂಧವ್ಯದ ಮೇಲೆ ಗಂಭೀರ ಪರಿಣಾಮಬೀರುವ ಸಾಧ್ಯತೆಯಿದೆ ಎಂದಿದೆ.

ಭಾರತೀಯ ರೈತರಿಗೆ ಸಂಬಂಧಿಸಿ ಸಮಸ್ಯೆಗಳು ನಮ್ಮ ಆಂತರಿಕ ವಿಚಾರಗಳಾಗಿದ್ದು, ಈ ಕುರಿತು ಹಸ್ತಕ್ಷೇಪ ಸ್ವೀಕಾರಾರ್ಹವಲ್ಲ.  ಇಂತಹ ಕ್ರಮಗಳು ಮುಂದುವರಿದರೆ ಭಾರತ ಹಾಗೂ ಕೆಡನಾ ನಡುವಿನ ಸಂಬಂಧಗಳ ಮೇಲೆ ಗಂಭೀರ ಪರಿಣಾಮಬೀರಬಹುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News