ಕಾರು ಢಿಕ್ಕಿ ; ಬಾಲಕ ಮೃತ್ಯು

Update: 2020-12-04 18:50 GMT

ಉಳ್ಳಾಲ : ಹೆದ್ದಾರಿ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ತಡರಾತ್ರಿ ಮೃತ ಪಟ್ಟಿದ್ದಾನೆ.

ಶುಕ್ರವಾರ ಸಂಜೆ  ಕುಂಪಲ ಬೈಪಾಸ್ ನಲ್ಲಿ  ನಡೆದು ಕೊಂಡು ರಸ್ತೆ ದಾಟುತ್ತಿದ್ದ ಐಯಾನ್ (16) ಎಂಬಾತನಿಗೆ ಅತೀ ವೇಗದಿಂದ ಬಂದ ಕಾರು ಢಿಕ್ಕಿಯಾಗಿ ತ್ತು. ಇದರಿಂದ ಗಂಭೀರ ಗಾಯಗೊಂಡ ಬಾಲಕನನ್ನು  ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News