ಹೆಬ್ರಿ: ವಿಷಪೂರಿತ ಹಾವು ಕಡಿದು ಮಹಿಳೆ ಮೃತ್ಯು

Update: 2020-12-13 16:59 GMT

ಹೆಬ್ರಿ, ಡಿ.13: ವಿಷದ ಹಾವು ಕಡಿತಕ್ಕೆ ಒಳಗಾದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಡಿ.11ರಂದು ಸೋಮೇಶ್ವರ ಜನತಾ ಕಾಲೋನಿ ಎಂಬಲ್ಲಿ ನಡೆದಿದೆ.
ಮೃತರನ್ನು ಜನತಾ ಕಾಲೋನಿಯ ರಾಜೇಶ್ ಎಂಬವರ ಮಗಳು ವಿದ್ಯಾಲಕ್ಷ್ಮಿ (36) ಎಂದು ಗುರುತಿಸಲಾಗಿದೆ. ಬೆಳಗ್ಗೆ ಮನೆಯ ಅಡುಗೆ ಕೋಣೆಯಲ್ಲಿ ಕಸ ಗುಡಿಸುತ್ತಿದ್ದ ಇವರ ಕಾಲಿಗೆ ವಿಷ ಪೂರಿತ ಹಾವು ಕಚ್ಚಿತ್ತೆನ್ನಲಾಗಿದೆ. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡರು.

ಆರ್ಥಿಕವಾಗಿ ಬಡವರಾಗಿರುವ ಮನೆಯವರು, ವಿದ್ಯಾಲಕ್ಷ್ಮೀ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗದೆ ಮಡಾಮಕ್ಕಿಯ ಕಬ್ಬಿನಾಲೆಯ ಪಂಡಿತ ಚಿಕಿತ್ಸೆಯನ್ನು ಕೂಡಿಸಿ ಮನೆಗೆ ತಂದು ಅರೈಕೆ ಮಾಡಿದ್ದರು. ಆದರೆ ಆಕೆ ರಾತ್ರಿ ವೇಳೆ ಮನೆಯಲ್ಲಿ ವಿಷವೇರಿ ಮೃತಪಟ್ಟರು. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News