ಗಣರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಆಗಮಿಸಬೇಡಿ: ಬ್ರಿಟನ್ ಪ್ರಧಾನಮಂತ್ರಿಗೆ ರೈತ ನಾಯಕರ ಮನವಿ

Update: 2020-12-23 08:47 GMT

ಹೊಸದಿಲ್ಲಿ,ಡಿ.23: 2021ರ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರವರು ಅತಿಥೀಯಾಗಿ ಆಗಮಿಸಲಿದ್ದಾರೆ. ಈ ನಡುವೆ ನೂತನ ಕೃಷಿ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರು, ಬ್ರಿಟಿಷ್-ಪಂಜಾಬಿ ಅಧಿಕಾರಗಳ ಮೂಲಕ ಬೋರಿಸ್ ರವರು ಕಾರ್ಯಕ್ರಮಕ್ಕೆ ಬರದಂತೆ ಮನವಿ ಮಾಡಲು ರೈತ ಮುಖಂಡರು ಆಗ್ರಹಿಸಿದ್ದಾರೆ ಎಂದು indianexpress.com ವರದಿಮಾಡಿದೆ.

“ರೈತರು ನೂತನ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಅವರ ಬೇಡಿಕೆಗಳು ಈಡೇರುವವರೆಗೂ ಬ್ರಿಟನ್ ಪ್ರಧಾನಿ ಭಾರತಕ್ಕೆ ಆಗಮಿಸದಂತೆ ಮನವಿ ಮಾಡಲು ನಾವು ಬ್ರಿಟನ್ ನ ರಾಜಕೀಯದಲ್ಲಿರುವ ಸಿಖ್ಖರೊಂದಿಗೆ ಮಾತುಕತೆ ನಡೆಸಿದ್ದೇವೆ ಎಂದು ರೈತ ಮುಖಂಡ ಹರೇಂದರ್ ಸಿಂಗ್ ಲಾಕೋವಾಲ್ ಹೇಳಿಕೆ ನೀಡಿದ್ದಾರೆ.

ಕಳೆದ ವಾರ ಭಾರತಕ್ಕೆ ಆಗಮಿಸಿದ್ದ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ, ಬೋರಿಸ್ ಜಾನ್ಸನ್ ಭಾರತದ ಗಣರಾಜ್ಯೋತ್ವಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News