ಪಶ್ಚಿಮ ಬಂಗಾಳದಲ್ಲಿ ಕಮಲ ಅರಳದೆ ನಾನು ನಿದ್ರಿಸುವುದಿಲ್ಲ: ಸುವೇಂದು ಅಧಿಕಾರಿ

Update: 2020-12-26 05:35 GMT

ಕಂತಿ,ಡಿ.25: ಪಶ್ಚಿಮ ಬಂಗಾಳದ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ ನಿಂದ ಬಿಜೆಪಿಗೆ ಪಕ್ಷಾಂತರಗೊಂಡಿರುವ ಸುವೇಂದು ಅಧಿಕಾರಿ ಸದ್ಯ ಬಿಜೆಪಿ ಪಕ್ಷದ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. “ನಾನು ಸರಿಯಾದ ಸಮಯದಲ್ಲಿ ಬಿಜೆಪಿ ಸೇರುವ ನಿರ್ಧಾರವನ್ನು ಕೈಗೊಂಡಿದ್ದು ಒಳಿತಾಗಿದೆ ಎಂಧು ಅವರ ಸ್ವಕ್ಷೇತ್ರ ಕಂತಿಯಲ್ಲಿ ನಡೆದ ಬೃಹತ್ ರ್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಿದರು.

“ನಂದಿಗ್ರಾಮದಲ್ಲಿ ಜನವರಿ ಎಂಟರಂದು ಬೃಹತ್ ರೋಡ್ ಶೋ ಹಮ್ಮಿಕೊಳ್ಳಲಾಗುವುದು ಎಂದೂ ಅವರು ಘೋಷಿಸಿದರು. ಜನವರಿ ಏಳರಂದು ನಂದಿಗ್ರಾಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರೋಡ್ ಶೋ ನಡೆಸಲಿದ್ದು, ಮರುದಿನವೇ ಬಿಜೆಪಿಯ ಸುವೇಂದು ಅಧಿಕಾರಿ ರೋಡ್ ಶೋ ನಡೆಸಲಿದ್ದಾರೆ. “ಜನವರಿ ಏಳರಂದು ನೀವು (ಮಮತಾ ಬ್ಯಾನರ್ಜಿ) ನಂದಿಗ್ರಾಮಕ್ಕೆ ಬನ್ನಿ. ಆದರೆ ಜನರ ನಿಜವಾದ ಶಕ್ತಿ ಏನೆಂದು ಮರುದಿನ ನಿಮಗೆ ತೋರಿಸಿಕೊಡಲಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಕಮಲ ಅರಳದೇ ನಾನು ನಿದ್ರಿಸುವುದಿಲ್ಲ” ಎಂದು ಸುವೇಂದು ಅಧಿಕಾರಿ ಸವಾಲೆಸೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News