ಮಾಣಿ ಹಳೀರ ರಹ್ಮಾನಿಯಾ ಜುಮಾ ಮಸ್ಜಿದ್ ಖಾಝಿಯಾಗಿ ಮಾಣಿ ಉಸ್ತಾದ್ ಅಧಿಕಾರ ಸ್ವೀಕಾರ

Update: 2021-01-05 04:31 GMT

ವಿಟ್ಲ, ಜ.5: ಮಾಣಿ ಹಳೀರದ ರಹ್ಮಾನಿಯಾ ಜುಮಾ ಮಸ್ಜಿದ್ ನ ಖಾಝಿಯಾಗಿ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ರವರ ಅಧಿಕಾರ ಸ್ವೀಕಾರ ಕಾರ್ಯಕ್ರಮವು ಮಾಣಿಯ ರಾಜ್ ಕಮಲ್ ಆಡಿಟೋರಿಯಂನಲ್ಲಿ ರವಿವಾರ ನಡೆಯಿತು.

ಸೈಯದ್ ಶಹೀರ್ ತಂಙಳ್ ಪೊಸೋಟು ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಇಬ್ರಾಹೀಂ ಫೈಝಿ ಕನ್ಯಾನ ಉದ್ಘಾಟಿಸಿದರು.

ಎಸ್.ಪಿ.ಹಂಝ ಸಖಾಫಿ ಬಂಟ್ವಾಳ ಮುಖ್ಯಭಾಷಣ ಮಾಡಿದರು.

ಉಮರುಲ್ ಫಾರೂಕ್ ಮದನಿ ಮಚ್ಚಂಪಾಡಿ, ಅಬ್ದುಲ್ಲ ಮದನಿ ಅಳಿಕೆ, ರಝಾಕ್ ಮದನಿ ಸೂರಿಕುಮೇರು, ಯಾಕೂಬ್ ಸಅದಿ ಬೆಟ್ಟಂಪಾಡಿ, ಅಹ್ಮದ್ ಮದನಿ ನೇರಳಕಟ್ಟೆ, ರಫೀಕ್ ಹಾಜಿ ಸುಲ್ತಾನ್, ಹುಸೈನ್ ಮುಸ್ಲಿಯಾರ್ ಇಸ್ಮಾಯೀಲ್ ಮದನಿ ನೇರಳಕಟ್ಟೆ ಮೊದಲಾದವರು ಮುಖ್ಯ ಅತಿಥಿಗಳಾಗಿ ‌ಭಾಗವಹಿದ್ದರು. 

ಎಸ್.ಎಂ.ಮುಹಮ್ಮದ್ ಶಾಫಿ ಮಾಣಿ, ಸೂರಿಕುಮೇರು ಬದ್ರಿಯ ಜುಮಾ ಮಸೀದಿಯ ಅಧ್ಯಕ್ಷ ಮೂಸಾ ಕರೀಂ ಮಾಣಿ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಲತೀಫ್ ನೇರಳಕಟ್ಟೆ, ಯೂಸುಫ್ ಹಾಜಿ ಸೂರಿಕುಮೇರು, ಮುಹಮ್ಮದ್ ಹಾಜಿ ಬಂಡಾಡಿ, ಯೂಸುಫ್ ಸಹೀದ್ ನೇರಳಕಟ್ಟೆ, ಇಬ್ರಾಹೀಂ ಹಾಜಿ ಮಾಣಿ, ಸುಲೈಮಾನ್ ಸೂರಿಕುಮೇರು, ಹಮೀದ್ ಇನಾಮ್ ಮಾಣಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.   

ಇಬ್ರಾಹೀಂ ಸಅದಿ ಮಾಣಿ ಪ್ರಸ್ತಾವಗೈದರು. ಶರೀಪ್ ಸಖಾಫಿ ಮಾಣಿ ಸ್ವಾಗತಿಸಿದರು. ಸಲೀಂ ಮಾಣಿ ವಂದಿಸಿದರು. ಡಿ.ಎಸ್.ಅಬ್ದುರ್ರಹ್ಮಾನ್ ಮದನಿ ಸೂರಿಕುಮೇರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News