ವಾಮಂಜೂರು: ದೇವಳದ ಮಹಾದ್ವಾರ, ಬಸ್ ತಂಗುದಾಣ ಉದ್ಘಾಟನೆ

Update: 2021-01-14 17:54 GMT

ಗುರುಪುರ, ಜ.14: ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನಕ್ಕೆ ಕೆತ್ತಿಕಲ್‌ನಲ್ಲಿ ಜೈ ಶಂಕರ್ ಮಿತ್ರ ಮಂಡಳಿ ನಿರ್ಮಿಸಿದ ನೂತನ ಮಹಾದ್ವಾರ ಹಾಗೂ ಅದರ ಪಕ್ಕದಲ್ಲೇ ನಿರ್ಮಿಸಲಾದ ಬಸ್ ತಂಗುದಾಣವನ್ನು ಗುರುವಾರ ಅಮೃತೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಭಟ್ ಮತ್ತು ಮೇಯರ್ ದಿವಾಕರ ಪಾಂಡೇಶ್ವರ ಉದ್ಘಾಟಿಸಿದರು.

ಕುಡುಪು ದೇವಸ್ಥಾನದ ಕೃಷ್ಣರಾಜ ತಂತ್ರಿ, ಉಪ ಮೇಯರ್ ವೇದಾವತಿ, ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ ಶೇಣವ, ಕಾರ್ಪೊರೇಟರ್‌ಗಳಾದ ಹೇಮಲತಾ ಆರ್. ಸಾಲ್ಯಾನ್, ಕೆ. ಭಾಸ್ಕರ ಮೊಲಿ, ಸುದೇಶ ಶೆಟ್ಟಿ ಬಿಜೈ ಹಾಗೂ ಉದ್ಯಮಿ ರಾಘು ಸಾಲ್ಯಾನ್, ಓಂ ಪ್ರಕಾಶ್ ಶೆಟ್ಟಿ, ಚಂದ್ರಹಾಸ್ ರೈ, ದಿನೇಶ್ ಜೆ ಕರ್ಕೇರ, ಸಿವೇಜ್ ಕಂಪೆನಿ ಅಧಿಕಾರಿ ಡಾ. ರೇಷ್ಮಾ, ಮಂಡಳಿಯ ಗೌರವಾಧ್ಯಕ್ಷ ಗಂಗಯ್ಯ ಅಮೀನ್, ಅಧ್ಯಕ್ಷ ದಿವಾಕರ ಆಚಾರ್ಯ, ಬಾಲಕೃಷ್ಣ ಭಟ್, ಶ್ರೀಹರಿ ಭಟ್, ಮೋಹನದಾಸ್ ಶೆಟ್ಟಿ, ಡಾ. ದಯಾಕರ ಪೂಂಜ ಉಪಸ್ಥಿತರಿದ್ದರು.

ಮೋಹನದಾಸ್ ಸ್ವಾಗತಿಸಿದರು. ಮನೋಜ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News