ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್ ರ‍್ಯಾಲಿ ರದ್ದುಪಡಿಸುವ ಪ್ರಶ್ನೆಯೇ ಇಲ್ಲ

Update: 2021-01-17 16:16 GMT

ಹೊಸದಿಲ್ಲಿ: ಜನವರಿ 26ರಂದು ಗಣರಾಜ್ಯೋತ್ಸವದಿನದಂದು ನಡೆಸಲು ಉದ್ದೇಶಿಸಲಾಗಿರುವ ಟ್ರ್ಯಾಕ್ಟರ್ ರ್ಯಾಲಿಯನ್ನು ರದ್ದುಪಡಿಸಲು ಇಂದು ನಿರಾಕರಿಸಿರುವ ಪ್ರತಿಭಟನಾನಿರತ ರೈತರು, ನಮ್ಮ ಪ್ರತಿಭಟನೆಯನ್ನು ಬೇಧಿಸಲು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ ಐಎ)ತನಿಖೆ ನಡೆಸಲು  ಮುಂದಾಗಿದೆ ಎಂದು ಆರೋಪಿಸಿದ್ದಾರೆ.

ರೈತರು ರಾಷ್ಟ್ರ ರಾಜಧಾನಿಯಲ್ಲಿ ಗಣರಾಜ್ಯೋತ್ಸವದ ದಿನ ಭಾರೀ ರ್ಯಾಲಿ ನಡೆಸಿ ತಮ್ಮ ಪ್ರತಿಭಟನೆಯನ್ನು ದಾಖಲಿಸಲು ಯೋಜಿಸಿದ್ದಾರೆ. ರ್ಯಾಲಿಯಲ್ಲಿ 1,000 ಟ್ರ್ಯಾಕ್ಟರ್ ಗಳು ಭಾಗವಹಿಸಲಿವೆ ಎಂದು ರೈತರು ಹೇಳಿದ್ದಾರೆ.

ನಾವು ಗಣರಾಜ್ಯೋತ್ಸವ ದಿನ ನಡೆಯುವ ಪರೇಡ್ ನ್ನು ಅಡ್ಡಿಪಡಿಸಲಾರೆವು. ಟ್ರ್ಯಾಕ್ಟರ್ ರ್ಯಾಲಿ 50 ಕಿ.ಮೀ. ದೂರದ ಪರೇಡ್ ನಗರವನ್ನು ಸುತ್ತುವರಿದಿರುವ  ಔಟರ್ ರಿಂಗ್ ರೋಡ್ ನಲ್ಲಿ ನಡೆಯಲಿದೆ ಎಂದು ರೈತ ನಾಯಕರೊಬ್ಬರು ದಿಲ್ಲಿಯ ಸಿಂಘು ಗಡಿಯಲ್ಲಿ ಮಾಧ್ಯಮಗಳಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News