ಮೀನು ಖರೀದಿಯಲ್ಲಿ ಲಕ್ಷಾಂತರ ರೂ. ವಂಚನೆ: ದೂರು

Update: 2021-01-21 17:00 GMT

ಮಂಗಳೂರು, ಜ.21: ಬೊಂಡಾಸ್ ಮೀನಿನ ಹಣ ಮರುಪಾವತಿಸದೇ ಲಕ್ಷಾಂತರ ರೂ. ವಂಚಿಸಿದ ಬಗ್ಗೆ ಎಕನಾಮಿಕ್ ಆ್ಯಂಡ್ ನಾರ್ಕೊಟಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಂಶಾದ್ ಮೊಯಿನ್ ಪಾಷ ಅವರ ಸಂಸ್ಥೆಗೆ ಶ್ರೀನಿವಾಸ್ ಭಟ್ ಎಂಬವರು 77 ಲಕ್ಷ ರೂ. ಮೀನಿನ ಹಣವನ್ನು ಮರುಪಾವತಿ ಮಾಡದೇ ವಂಚಿಸಿದ್ದಾರೆ. 2018ರಿಂದ ನಯಾಪೈಸೆಯನ್ನು ಪಾವತಿಸಿಲ್ಲ. ಇದರಿಂದ ಸಂಸ್ಥೆಯು ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ಸಂತ್ರಸ್ತೆಯು ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News