ತುಂಬೆಯ ಇಂಡಿಯನ್ ಟಿಂಬರ್ ಇಂಡಸ್ಟ್ರೀಸ್ ಮಾಲಕ ಹಾಜಿ ಅಬ್ದುಲ್ ಅಝೀಝ್ ನಿಧನ

Update: 2021-01-22 06:03 GMT

ಮಂಗಳೂರು, ಜ.22: ತುಂಬೆಯ ಇಂಡಿಯನ್ ಟಿಂಬರ್ ಇಂಡಸ್ಟ್ರೀಸ್ ಮಾಲಕ ಹಾಜಿ ಅಬ್ದುಲ್ ಅಝೀಝ್(60) ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ.

ಮಂಗಳೂರಿನ ಜೆಪ್ಪು ನಿವಾಸಿಯಾಗಿದ್ದ ಹಾಜಿ ಅಬ್ದುಲ್ ಅಝೀಝ್ ಅವರು ಅಲ್ಪಕಾಲದ ಅನಾರೋಗ್ಯದ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ.

ದಕ್ಷಿಣ ಕನ್ನಡ ಸ್ವಾ ಮಿಲ್ ಓನರ್ಸ್ ಅಸೋಸಿಯೇಶನ್ ಅಧ್ಯಕ್ಷರಾಗಿದ್ದ ಅವರು ಹಲವು ಧಾರ್ಮಿಕ, ಸಾಮಾಜಿಕ ಸಂಘಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಅವರ ದಫನ ಕಾರ್ಯವು ಇಂದು ಸಂಜೆ ಅಸರ್ ನಮಾಝ್ ಗಿಂತ ಮುಂಚಿತವಾಗಿ ಜೆಪ್ಪು ಮುಹಿಯುದ್ದೀನ್ ಜುಮಾ ಮಸೀದಿಯ ಖಬರ್ ಸ್ಥಾನದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News