​ಜ.27:ಮೆಲ್ಕಾರ್‌ನಲ್ಲಿ ಎಸ್‌ವೈಎಸ್ ವೆಸ್ಟ್ ಜಿಲ್ಲಾ ಕೌಂಟ್ 20 ಸಾಂಘಿಕ ಶಿಬಿರ

Update: 2021-01-23 17:47 GMT

ಮಂಗಳೂರು, ಜ.23: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ಎಸ್‌ವೈಎಸ್)ದ ವೆಸ್ಟ್ ಜಿಲ್ಲಾ ಕೌಂಟ್ 20 ಸಾಂಘಿಕ ಶಿಬಿರವು ಜ.27ರಂದು ಬೆಳಗ್ಗೆ 9:30ರಿಂದ ಅಪರಾಹ್ನ 2:30ಕ್ಕೆ ಮೆಲ್ಕಾರ್‌ನ ಎಸ್‌ಎಸ್ ಆಡಿಟೋರಿಯಂನಲ್ಲಿ ನಡೆಯಲಿದೆ.

ಜಿಲ್ಲಾ ಸಮಿತಿ ಸದಸ್ಯ ಸೈಯದ್ ಜಲಾಲ್ ತಂಙಳ್ ಅಳೇಕಲ ದುಆಗೈಯಲಿದ್ದು, ಜಿಲ್ಲಾಧ್ಯಕ್ಷ ಸಿಎಚ್ ಮುಹಮ್ಮದಲಿ ಸಖಾಫಿ ಅಶ್ಹರಿಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಧಾನ ಕಾರ್ಯದರ್ಶಿ ಇಬ್ರಾಹಿಮ್ ಖಲೀಲ್ ಮುಸ್ಲಿಯಾರ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ರಾಜ್ಯಾಧ್ಯಕ್ಷ ಪಿಎಂ ಉಸ್ಮಾನ್ ಸಅದಿ ಪಟ್ಟೋರಿ ಉದ್ಘಾಟಿಸಲಿದ್ದಾರೆ.

ಸಂಘಟನೆಯ ಕಾರ್ಯಕ್ಷೇತ್ರದ ಬಗ್ಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ ಝೈನಿ ಕಾಮಿಲ್, ಲೀಡರ್‌ಶಿಪ್ ಟ್ರೈನಿಂಗ್ ಬಗ್ಗೆ ರಾಜ್ಯ ಸಮಿತಿ ಸದಸ್ಯ ಎಸ್‌ಪಿ ಹಂಝ ಸಖಾಫಿ ಬಂಟ್ವಾಳ, ಸುನ್ನಿ ಚಳವಳಿಯ ಹಾದಿ ವಿಷಯದ ಬಗ್ಗೆ ಕೇರಳ ಎಸ್‌ವೈಎಸ್ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಸಖಾಫಿ ಮಾಲೇಕಲ್ ಮಾತನಾಡಲಿದ್ದಾರೆ.

ರಾಜ್ಯ ಕಾರ್ಯದರ್ಶಿಗಳಾದ ಟಿಎಂ ಮುಹಿಯ್ಯುದ್ದೀನ್ ಕಾಮಿಲ್ ಸಖಾಫಿ ತೋಕೆ, ಅಶ್ರಫ್ ಕಿನಾರ, ರಾಜ್ಯ ಸಮಿತಿ ಸದಸ್ಯರಾದ ಕೆಕೆಎಂ ಕಾಮಿಲ್ ಸಖಾಫಿ, ಎಂಪಿಎಂ ಅಶ್ರಫ್ ಸಅದಿ ಮಲ್ಲೂರು, ಹನೀಫ್ ಹಾಜಿ ಉಳ್ಳಾಲ, ಎನ್‌ಎಸ್ ಉಮರ್ ಮಾಸ್ಟರ್, ಅಬ್ದುಲ್ ಹಮೀದ್ ಬಜ್ಪೆಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News