ಮಂಗಳೂರು: ಉರುಳಿಬಿದ್ದ ಬೃಹತ್ ಆಲದಮರ; 3 ವಾಹನಗಳು ಜಖಂ

Update: 2021-01-24 04:17 GMT

ಮಂಗಳೂರು, ಜ.24: ನಗರದ ರಥಬೀದಿಯ ವೆಂಕಟರಮಣ ದೇವಸ್ಥಾನದ ಎದರುಗಡೆಯಿರುವ ಬೃಹತ್ ಅಶ್ವಥ ಮರವೊಂದು ಇಂದು ಬೆಳಗ್ಗೆ ಉರುಳಿ ಬಿದ್ದಿದೆ. ಈ ವೇಳೆ ಅದರಡಿಗೆ ಸಿಲುಕಿ ಮೂರು ವಾಹನಗಳು ಜಖಂಗೊಂಡಿವೆ.

ಇಂದು ಬೆಳಗ್ಗೆ 8:10ರ ಸುಮಾರಿಗೆ ಕಾರ್ ಸ್ಟ್ರೀಟ್ ಸಮೀಪದ ಶ್ರೀ ವೆಂಕಟರಮಣ ದೇವಸ್ಥಾನದ ಬಳಿಯ ಕಟ್ಟೆಯಲ್ಲಿದ್ದ ಸುಮಾರು 80 ವರ್ಷ ಹಳೆಯ ಆಲದಮರ ಏಕಾಏಕಿ ಉರುಳಿಬಿದ್ದಿದೆ. ಈ ವೇಳೆ ಸ್ಥಳದಲ್ಲಿದ್ದ ಒಂದು ನೀರು ಸಾಗಾಟದ ಟ್ಯಾಂಕರ್, ಒಂದು ಕಾರು ಹಾಗೂ  ಕ್ರೇನ್ ವೊಂದು ಅದರಡಿಗೆ ಸಿಲುಕಿ ಜಖಂಗೊಂಡಿದೆ ಎಂದು ತಿಳಿದುಬಂದಿದೆ.

ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News