ದಾರುನ್ನೂರ್ ಮಂಗಳೂರು ವಲಯ ಸಮಿತಿ: ಅಧ್ಯಕ್ಷರಾಗಿ ಸಾಲಿಹ್ ತಂಙಳ್ ಆಯ್ಕೆ

Update: 2021-01-27 05:02 GMT

ಮಂಗಳೂರು: ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಸಂಸ್ಥೆಯ ಮಂಗಳೂರು ವಲಯ ಸಮಿತಿಯ ನೂತನ ಅಧ್ಯಕ್ಷರಾಗಿ ಸಾಲಿಹ್ ತಂಙಳ್ ಆಯ್ಕೆಯಾದರು.

ಮಂಗಳೂರಿನ ಹೋಟೆಲ್ ಒಶಿಯನ್ ಪರ್ಲ್ ಸಭಾಂಗಣದಲ್ಲಿ ನಡೆದ ಮಹಸಭೆಯು ದಾರುನ್ನೂರ್ ಸಂಸ್ಥೆಯ ಅಧ್ಯಕ್ಷರಾದ ಖಾಝಿ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಅಧ್ಯಕ್ಷತೆಯಲ್ಲಿ ನಡೆಯಿತು.  ದುಆ ಮೂಲಕ ತ್ವಾಖಾ ಉಸ್ತಾದ್ ರವರು ಸಭೆಯನ್ನು ಉದ್ಘಾಟಿಸಿದರು.

ಮುಖ್ಯ ಆತಿಥಿಯಾಗಿ ಆಗಮಿಸಿದ ಸ್ವದಖತುಲ್ಲಾ ಫೈಝಿ ಶೈಕ್ಷಣಿಕ ಪ್ರಗತಿಯ ಮೂಲಕ ಹಿಂದುಳಿದ ವರ್ಗದ ಸಬಲೀಕರಣ ಸಾಧ್ಯವೆಂದು ನುಡಿದರು. ಮುಂದಿನ ದಿನಗಳಲ್ಲಿ ಶಿಕ್ಷಣದಿಂದ ವಂಚಿತರಾದವರಿಗೆ ನೇತೃತ್ವನ್ನು ನೀಡಲು ಸಂಸ್ಥೆಯ ವಿದ್ಯಾರ್ಥಿಗಳು ಅರ್ಹರಾಗುವುದರಲ್ಲಿ ಸಂಶಯವಿಲ್ಲ. ಉಚಿತ ಶಿಕ್ಷಣವನ್ನು ನೀಡುವ ಸಂಸ್ಥೆಯ ಏಳಿಗೆಯಲ್ಲಿ ಸಮುದಾಯದ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಕೋರಿದರು.

ಸಮಿತಿಗೆ ಸಾಲಿಹ್ ತಂಙಳರನ್ನು ಅಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಹಾಜಿ ಮುಹಮ್ಮದ್ ಹನೀಫ್ ಬಂದರ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ದುಲ್ ರಝಾಕ್ ಹಾಜಿ, ಅಬ್ದುಸ್ಸಮದ್ ಹಾಜಿ, ಅದ್ದು ಹಾಜಿ, ಐ ಮೋಹಿದಿನಬ್ಬ ಹಾಜಿ, ಫಕೀರಬ್ಬ ಮಾಸ್ಟರ್, ಅಬ್ದುಲ್ ರಶೀದ್ ಹಾಜಿ, ಅಬ್ದುಲ್ ಖಾದರ್ ಹಾಜಿ ಎ. ಕೆ, ಸುಹೈಲ್, ಅಬ್ಬಾಸ್, ಹಂಝ, ಅಬ್ದುಲ್ ರಹ್ಮಾನ್, ಮಿಹ್ರಾಜ್, ಫೈಝಲ್ ಕುತ್ತಾರ್, ಹಾರಿಸ್ ಹಾಜಿ, ರಿಝ್ವಾನ್ ಕೊಯ್ಯುರ್ಮ ಕ್ಸೂದ್ ಇಂಜಿನಿಯರ್, ಇಬ್ರಾಹಿಂ ಇವರನ್ನು ಆಯ್ಕೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ದಾರುನ್ನೂರ್ ಸಂಸ್ಥೆಯ ಶ್ರೇಯಾಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಹಾಜಿಯವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಕಿರು ಪರಿಚಯವನ್ನು ಮಾಡಿ ಹನೀಫ್ ಹಾಜಿ ಸ್ವಾಗತಿಸಿ, ವಂದಿಸಿದರು. ಈ ಸಂದರ್ಭದಲ್ಲಿ ದಾರುನ್ನೂರ್ ಸಂಸ್ಥೆಯ ಮುಖ್ಯ ಶಿಕ್ಷಕರಾದ ಹುಸೈನ್ ರಹ್ಮಾನಿ, ವ್ಯವಸ್ಥಾಪಕ ರಾದ ಅಬ್ದುಲ್ ಹಕೀಮ್, ಶಿಕ್ಷಕರಾದ ಮುಈನುದ್ದೀನ್ ಹುದವಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News