ದೀಪ್ ಸಿಧುವಿನೊಂದಿಗಿನ ನಂಟಿನ ಬಗ್ಗೆ ಬಿಜೆಪಿ ಸಂಸದ ಸನ್ನಿ ಡಿಯೋಲ್ ಹೇಳಿದ್ದೇನು ?

Update: 2021-01-27 15:07 GMT

ಚಂಡಿಗಢ, ಜ. 27: ದಿಲ್ಲಿಯಲ್ಲಿ ನಡೆದ ರೈತರ ಟ್ರಾಕ್ಟರ್ ರ‍್ಯಾಲಿಯ ಸಂದರ್ಭ ಕೆಂಪುಕೋಟೆ ಪ್ರವೇಶಿಸಿದ ಪ್ರತಿಭಟನಾಕಾರರೊಂದಿಗಿದ್ದ ನಟ ದೀಪ್ ಸಿಧುವಿನೊಂದಿಗೆ ತನಗಾಗಲಿ, ತನ್ನ ಕುಟುಂಬಕ್ಕಾಗಲಿ ಯಾವುದೇ ನಂಟು ಇಲ್ಲ ಎಂದು ಬಿಜೆಪಿ ಸಂಸದ ಹಾಗೂ ನಟ ಸನ್ನಿ ಡಿಯೋಲ್ ಸ್ಪಷ್ಟಪಡಿಸಿದ್ದಾರೆ.

‘‘ನನಗೆ ಅಥವಾ ನನ್ನ ಕುಟುಂಬಕ್ಕೆ ದೀಪ್ ಸಿಧು ಅವರೊಂದಿಗೆ ಯಾವುದೇ ನಂಟು ಇಲ್ಲ ಎಂದು ನಾನು ಡಿಸೆಂಬರ್ 6ರಂದೇ ಟ್ವಿಟ್ಟರ್‌ನಲ್ಲಿ ಸ್ಪಷ್ಟ­­­­­ಪಡಿಸಿದ್ದೇನೆ ಎಂದು ಸನ್ನಿ ಡಿಯೋಲ್ ಮಂಗಳವಾರ ರಾತ್ರಿ ಟ್ವೀಟ್ ಮಾಡಿದ್ದಾರೆ.

ಜನವ­­­­­­­ 26ರಂದು ಕೆಂಪು ಕೋಟೆಯಲ್ಲಿ ನಡೆದ ಘಟನೆಗಳ ಬಗ್ಗೆ ನನಗೆ ತೀವ್ರ ನೋವಾಗಿದೆ ಎಂದು ಸನ್ನಿ ಡಿಯೋಲ್ ಹೇಳಿದ್ದಾರೆ.

ಕೆಂಪು ಕೋಟೆಯಲ್ಲಿ ಧ್ವಜ ಹಾರಿಸಿದ ಪ್ರತಿಭಟನಾಕಾರರಲ್ಲಿ ಪಂಜಾಬಿ ಚಿತ್ರ ನಟ ದೀಪ್ ಸಿಧು ಇದ್ದರು. ಸನ್ನಿ ಡಿಯೋಲ್ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಪಂಜಾಬ್‌ನ ಗುರುದಾಸ್‌ಪುರ ಕ್ಷೇತ್ರದಿಂದ ಸ್ಪರ್ಧಿಸುವುದಕ್ಕಿಂತ ಮುನ್ನ ಸಿಧು ಅವರೊಂದಿಗೆ ನಿಕಟವಾಗಿದ್ದರು.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಿಧು ರೈತ ಚಳವಳಿಗೆ ಸೇರಿದ ಬಳಿಕ ಬಿಜೆಪಿ ಸಂಸದ ಸನ್ನಿ ಡಿಯೋಲ್ ಅವರಿಂದ ಅಂತರ ಕಾಯ್ದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News