ಬಂಟಕಲ್ಲು: ಎವಾ ಅಮಿ ಕ್ಹೆಲಯಾ ಕೂಡ್‌ಕಟ್ ಕ್ರೀಡೋತ್ಸವ

Update: 2021-02-08 14:25 GMT

ಶಿರ್ವ, ಫೆ.8: ಬಂಟಕಲ್ಲು ರಾಜಾಪುರ ಸಾರಸ್ವತ ಯುವ ವೃಂದದ ನೇತೃತ್ವ ದಲ್ಲಿ ಕೂಡ್‌ಕಟ್ ಪರಿಕಲ್ಪನೆಯಡಿ ಸಮಾಜ ಸಂಘಟನೆ, ಸಾಮೂಹಿಕ ಸಾಮರಸ್ಯ ಬೆಸೆಯುವ ದ್ವಿತೀಯ ವರ್ಷದ ಎವಾ ಅಮಿ ಕ್ಹೆಲಯಾ ಕೂಡ್‌ಕಟ್ ಕ್ರೀಡೋತ್ಸವವು ಹೇರೂರಿನ ಬಂಟಕಲ್ಲು ಶಾಲಾ ಮೈದಾನದಲ್ಲಿ ರವಿವಾರ ಜರಗಿತು.

ಕ್ರೀಡೋತ್ಸವವನ್ನು ಉದ್ಯಮಿ ದತ್ತಾತ್ರೇಯ ಆರ್.ಪಾಟ್ಕರ್ ಹೇರೂರು ಉದ್ಘಾಟಿಸಿದರು. ಬಂಟಕಲ್ಲು ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಗಂಪದ ಬೈಲು ಜಯರಾಮ ಪ್ರಭು, ರಾಜೇಂದ್ರ ಪಾಟ್ಕರ್ ಕೋಡುಗುಡ್ಡೆ ಮುಖ್ಯ ಅತಿಥಿಗಳಾಗಿದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಯುವವೃಂದದ ಅಧ್ಯಕ್ಷ ವಿಶ್ವನಾಥ್ ಬಾಂದೇಲ್ಕರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಂಟಕಲ್ಲು ದೇವಳದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಭಾರತೀಯ ಸೇನಾದಳದ ರಾಜೇಂದ್ರ ಪಾಟ್ಕರ್, ಸುಕುಮಾರ್ ಪ್ರಭು ಮುಂಬೈ, ಕಸಾಪ ಕಾಪು ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಿಜೇತರಿಗೆ ಟ್ರೋಫಿ ಹಾಗೂ ಬಹುಮಾನ ವಿತರಿಸಿದರು.

ಯುವ ವೃಂದದ ಗೌರವಾಧ್ಯಕ್ಷ ಕೆ.ಆರ್.ಪಾಟ್ಕರ್ ಪ್ರಾಸ್ತಾವಿಕವಾಗಿ ಮಾತನಾ ಡಿದರು. ಈ ಸಂದಭರ್ದಲ್ಲಿ ಗ್ರಾಪಂ ಚುನಾವಣೆಯಲ್ಲಿ ವಿಜೇತ ಬೆಳ್ಳೆ ಗ್ರಾಪಂ ಮಾಜಿ ಅಧ್ಯಕ್ಷ ಶಶಿಧರ ವಾಗ್ಲೆ, ಶಿರ್ವ ಗ್ರಾಪಂಗೆ 5ನೆ ಬಾರಿಗೆ ಆಯ್ಕೆಗೊಂಡ ಕೆ.ರಾಮರಾಯ ಪಾಟ್ಕರ್‌ರನ್ನು ಸನ್ಮಾನಿಸಲಾ ಯಿತು. ಕ್ರೀಡಾ ಕಾರ್ಯದರ್ಶಿ ಪ್ರೀತವ್ ವಿಜೇತರ ಪಟ್ಟಿ ವಾಚಿಸಿದರು. ಮುದರಂಗಡಿ ದೇವದಾಸ್ ಪಾಟ್ಕರ್ ಕಾರ್ಯಕ್ರಮ ನಿರೂಪಿಸಿದರು. ಯುವವೃಂದದ ಕಾರ್ಯದರ್ಶಿ ಆಶೀಷ್ ಪಾಟ್ಕರ್ ವಂದಿಸಿದರು.

ಪಂದ್ಯಾಟದ ವಿಜೇತರು

ಪುರುಷರ ವಿಭಾಗದ ಕ್ರಿಕೆಟ್: ವಿನ್ನರ್- ಸಡಂಬೈಲು ಕೂಡುಕಟ್, ರನ್ನರ್- ಹೇರೂರು ಬಂಟಕಲ್ಲು ಕೂಡುಕಟ್, ಹಗ್ಗ ಜಗ್ಗಾಟ: ವಿನ್ನರ್- ಸೂಡ ಕೂಡುಕಟ್, ರನ್ನರ್- ಪೊದಮಲೆ ಕೂಡುಕಟ್, ಮಹಿಳಾ ವಿಭಾಗದ ತ್ರೋಬಾಲ್: ವಿನ್ನರ್ -ಸೂಡ ಕೂಡುಕಟ್, ರನ್ನರ್-ಸಡಂಬೈಲು ಕೂಡುಕಟ್, ಹಗ್ಗ ಜಗ್ಗಾಟ: ವಿನ್ನರ್- ಸೂಡ ಕೂಡುಕಟ್, ರನ್ನರ್-ಪೊದಮಲೆ ಕೂಡುಕಟ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News