ಡಿಸೇಲ್ ಸಬ್ಸಿಡಿ ಡೆಲಿವರಿ ಪಾಯಿಂಟ್‌ನಲ್ಲಿ ಸಿಗುವಂತೆ ಪ್ರಯತ್ನ : ಸಚಿವ ಅಂಗಾರ

Update: 2021-02-09 14:47 GMT

ಮಲ್ಪೆ : ಮೀನುಗಾರಿಕೆ ಬಂದರು ಮತ್ತು ಮೀನುಗಾರರ ಸಮಸ್ಯೆಗಳನ್ನು ಅಧ್ಯಯನ ನಡೆಸಿ, ಇದಕ್ಕೆ ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರ ಒದಗಿಸುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ರಾಜ್ಯ ಮೀನುಗಾರಿಕೆ ಹಾಗೂ ಬಂದರು ಸಚಿ ಎಸ್.ಅಂಗಾರ ಭರವಸೆ ನೀಡಿದ್ದಾರೆ.

ಮಲ್ಪೆ ಮೀನುಗಾರಿಕೆ ಬಂದರು, ಸ್ಲಿಪ್‌ವೇ ಮತ್ತು ಟೆಬ್ಮಾ ಶಿಪ್ ಯಾರ್ಡ್‌ಗೆ ಭೇಟಿ ನೀಡಿ ವೀಕ್ಷಿಸಿದ ಸಚಿವರು ಬಳಿಕ ಮೀನುಗಾರರ ಮುಖಂಡ ರೊಂದಿಗೆ ಸಮಾಲೋಚನೆ ನಡೆಸಿ, ಮಾತನಾಡುತಿದ್ದರು. ಸಮಸ್ಯೆುಗಳ ಬಗ್ಗೆ ಸಮಗ್ರವಾಗಿ ಅಧ್ಯಯನ ನಡೆಸಿ, ಮೀನುಗಾರಿಕೆ ಮತ್ತು ಬಂದರು ಇಲಾಖೆಯ ಅಧಿಕಾರಿ ಗಳು, ಮೀನುಗಾರ ಮುಖಂಡರುಗಳ ಸಭೆ ಕರೆದು, ಅವರೊಂದಿಗೆ ಚರ್ಚೆ ನಡೆಸಿ ಬಳಿಕ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.

ಮೀನುಗಾರಿಕೆ ಇಲಾಖೆ ಮತ್ತು ಬಜೆಟ್‌ಗೆ ಸಂಬಂಧಪಟ್ಟ ಸಭೆಯನ್ನು ಮುಖ್ಯಮಂತ್ರಿ ೆ.10ರಂದು ಬೆಂಗಳೂರಿನಲ್ಲಿ ಕರೆದಿದ್ದು, ಈ ಸಭೆಯಲ್ಲಿ ಡಿಸೇಲ್ ಸಬ್ಸಿಡಿಯನ್ನು ಈ ಹಿಂದಿನ ವಿಧಾನದಂತೆ ಡೆಲಿವರಿ ಪಾಯಿಂಟ್‌ನಲ್ಲಿ ದೊರೆಯುವಂತೆ ಮತ್ತು ಸ್ಲಿಪ್‌ವೇ ನಿರ್ವಹಣೆಯನ್ನು ಮೀನುಗಾರ ಸಂಘಕ್ಕೆ ನೀಡುವ ವಿಚಾರ ಮುಖ್ಯಮಂತ್ರಿ ಗಮನಕ್ಕೆ ತಂದು ಶೀಘ್ರ ಜಾರಿಗೆ ಪ್ರಯತ್ನ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಈ ಸಂದರ್ಭದಲ್ಲಿ ಮಲ್ಪೆ ಮೀನುಗಾರ ಸಂಘ ಮತ್ತು ಮೀನು ಮಾರಾಟ ೆಡರೇಶನ್ ವತಿಯಿಂದ ಸಚಿವರನ್ನು ಸನ್ಮಾನಿಸಲಾಯಿತು. ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಎ.ಸುವರ್ಣ, ಮೀನುಗಾರ ಸಂಘದ ಉಪಾಧ್ಯಕ್ಷರಾದ ರಮೇಶ್ ಕೋಟ್ಯಾನ್, ವಿಠಲ ಕರ್ಕೇರ, ನಾಗರಾಜ್ ಬಿ. ಕುಂದರ್, ಪ್ರಧಾನ ಕಾರ್ಯದರ್ಶಿ ಸುಭಾಸ್ ಮೆಂಡನ್, ಕೋಶಾಧಿಕಾರಿ ಶಿವಾನಂದ, ಮೀನುಗಾರ ಮುಖಂಡರಾದ ಕಿಶೋರ್ ಡಿ.ಸುವರ್ಣ, ಸತೀಶ್ ಕುಂದರ್, ರಾಮಚಂದ್ರ ಕುಂದರ್, ಸಾಧು ಸಾಲ್ಯಾನ್, ಗೋಪಾಲ ಆರ್.ಕೆ., ನಾರಾಯಣ ಕರ್ಕೇರ, ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ತಿಪ್ಪೆಸ್ವಾಮಿ, ಎಂಜಿನಿಯರ್ ಮಂಜೆಗೌಡ, ಉಪನಿರ್ದೇಶಕ ಗಣೇಶ್ ಕೆ., ಹಿರಿಯ ಸಹಾಯಕ ನಿರ್ದೇಶಕ ಶಿವ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಡಿಸೇಲ್ ಪ್ರಮಾಣ 500ಲೀ.ಗೆ ಏರಿಸಲು ಮನವಿ

ಹೊರ ರಾಜ್ಯದಲ್ಲಿ ಮೀನುಗಾರಿಕೆ ನಡೆಸುವ ಸಮಯ ಅಲ್ಲಿನ ಮೀನುಗಾರ ರಿಂದ ಅಗುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು. ಮೀನುಗಾರಿಕೆ ಬೋಟ್ ಗಳಿಗೆ ನೀಡಲಾಗುತ್ತಿರುವ ಡಿಸೇಲ್ ಪ್ರಮಾಣವನ್ನು 300ಲೀ. ನಿಂದ 500 ಲೀ. ಗೆ ಹೆಚ್ಚಿಸಿ ತಿಂಗಳಾವಾರು ಬದಲು ವಾರ್ಷಿಕ ಕೋಟ ದಲ್ಲಿ ನೀಡಬೇಕು. ಡಿಸೇಲ್ ಸಹಾಯಧನವನ್ನು ಈ ಹಿಂದಿನಂತೆ ಡೆಲಿವರಿ ಪಾಯಿಂಟ್‌ನಲ್ಲಿ ನೀಡಬೇಕು ಎಂದು ಮಲ್ಪೆ ಆಳಸಮುದ್ರ ಮೀನುಗಾರ ಸಂಘದ ಅಧ್ಯಕ್ಷ ಕಿಶೊೀರ್ ಡಿ.ಸುವರ್ಣ ಮನವಿ ಮಾಡಿದರು.

ಮೀನು ಮಾರಾಟ ಫೆಡರೇಶನಿನ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಮಾತ ನಾಡಿ, ಮೂರನೇ ಹಂತದ ಬಂದರಿನಲ್ಲಿ ನಿರ್ಮಿಸಿದ ಸ್ಲಿಪ್‌ವೇ ನಿರ್ವಹಣೆ ಯನ್ನು ಮೀನುಗಾರ ಸಂಘಕ್ಕೆ ವಹಿಸಬೇಕು. ಟೆಬ್ಮಾ ಶಿಪ್‌ಯಾರ್ಡ್ ಅವಧಿ ಮುಗಿದ ಬಳಿಕ ಆ ಜಾಗವನ್ನು ಕರಾರಿನಂತೆ ಮೀನುಗಾರಿಕೆ ಬಂದರಿನ ಅಭಿವೃದ್ದಿಗೆ ಮಾತ್ರ ನೀಡಬೇಕೆಂದು ಸಚಿವರನ್ನು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News