ಆಂಧ್ರಪ್ರದೇಶ: ಬಸ್ ಅಪಘಾತ, 14 ಮಂದಿ ಮೃತ್ಯು

Update: 2021-02-14 06:03 GMT

ಆಂಧ್ರಪ್ರದೇಶ: ರಾಜ್ಯದ ಕರ್ನೂಲ್ ಜಿಲ್ಲೆಯಲ್ಲಿ ರವಿವಾರ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಹಾಗೂ ಟ್ರಕ್ ನಡುವೆ ಸಂಭವಿಸಿರುವ ಭೀಕರ ಅಪಘಾತದಲ್ಲಿ ಮಕ್ಕಳು ಸಹಿತ 14 ಮಂದಿ ಮೃತಪಟ್ಟಿದ್ದಾರೆ. 

ಘಟನೆಯಲ್ಲಿ ಕೇವಲ 4 ಮಕ್ಕಳು ಬದುಕುಳಿದಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಆಧಾರ್ ಕಾರ್ಡ್ ಗಳು ಹಾಗೂ ಫೋನ್ ನಂಬರ್ ಗಳ ಆಧಾರದಲ್ಲಿ ಪೊಲೀಸರು ವಿವರ ಸಂಗ್ರಹಿಸುತ್ತಿದ್ದಾರೆ.

ರಾಜ್ಯದ ಕರ್ನೂಲ್ ಜಿಲ್ಲೆಯ ವೆಲಡುರ್ಟಿ ಮಂಡಲ್ ನ ಹಳ್ಳಿಯಲ್ಲಿ ಘಟನೆ ಸಂಭವಿಸಿದೆ. ಮಿನಿ ಬಸ್ ನಲ್ಲಿ ಒಟ್ಟು 18 ಜನರಿದ್ದರು. ಅತ್ಯಂತ ವೇಗವಾಗಿ ಚಲಿಸುತ್ತಿದ್ದ ಮಿನಿ ಬಸ್ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ಗೆ ಢಿಕ್ಕಿಯಾಗಿ ಡಿವೈಡರ್ ಮೇಲೆ ಬಿದ್ದು, ಮತ್ತೊಂದು ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಲಾರಿಗೆ ಢಿಕ್ಕಿಯಾಗಿದೆ.

ಘಟನೆಯ ವೇಳೆ 18 ಜನರಿದ್ದರು. ಘಟನೆಯು ಬೆಳಗ್ಗೆ 4 ಗಂಟೆಯ ಸುಮಾರಿಗೆ ನಡೆದಿದೆ. ಮಿನಿ ಬಸ್ ಚಿತ್ತೂರು ಜಿಲ್ಲೆಯಿಂದ ರಾಜಸ್ಥಾನದ ಅಜ್ಮೇರ್ ಗೆ ತೆರಳುತ್ತಿತ್ತು ಎಂದು ಕರ್ನೂಲ್ ಪೊಲೀಸ್ ಮುಖ್ಯಸ್ಥ ಕೆ.ಫಕಿರಪ್ಪ ತಿಳಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News