ನುಕ್ಯಾಡಿ ದೇವಳದ ಲಕ್ಷಾಂತ ರೂ. ಮೌಲ್ಯದ ಸೊತ್ತು ಕಳವು

Update: 2021-02-14 14:47 GMT

ಶಂಕರನಾರಾಯಣ, ಫೆ.8: ಅಂಪಾರು ಗ್ರಾಮದ ನುಕ್ಯಾಡಿ ಶ್ರೀಉದ್ಬವ ಸಿದ್ದಿ ವಿನಾಯಕ ದೇವಸ್ಥಾನಕ್ಕೆ ಫೆ.12ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ವೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಕಳ್ಳರು ದೇವಸ್ಥಾನದ ಸುತ್ತಲು ಕಟ್ಟಿರುವ ಶಬ್ದ ಗಂಟೆಗಳಲ್ಲಿ 106 ಕೆಜಿ ತೂಕದ ಒಂದು ದೊಡ್ಡ ಶಬ್ದ ಗಂಟೆ, ವಿವಿಧ ತೂಕದ ಸುಮಾರು 500 ರಿಂದ 600 ಶಬ್ಧ ಗಂಟೆಗಳು ಹಾಗೂ ವಿವಿಧ ತರಹದ ಸುಮಾರು 60 ಆರತಿ ತಟ್ಟೆಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಇವುಗಳ ಒಟ್ಟು ಮೌಲ್ಯ 2ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News