ಅಸಹಾಯಕ ವೃದ್ಧ ಪತ್ತೆ; ಆಶ್ರಮಕ್ಕೆ ದಾಖಲು

Update: 2021-02-26 15:37 GMT

ಉಡುಪಿ, ಫೆ.26: ಹೂಡೆ- ಬೇಂಗ್ರೆಯ ಬೊಬ್ಬರ್ಯಗುಡಿ ಹತ್ತಿರ ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧರನ್ನು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿಬ್ಬಂದಿಗಳು ರಕ್ಷಿಸಿ ಮಣಿಪಾಲದ ಸರಳಬೆಟ್ಟಿನ ಹೊಸಬೆಳಕು ಆಶ್ರಮಕ್ಕೆ ದಾಖಲಿಸಿದ್ದಾರೆ. ವೃದ್ದರು ತನ್ನ ಹೆಸರು ಮಣಿ, ಊರು ಕೇರಳ ಎನ್ನುತ್ತಿದ್ದು, ಮಲೆಯಾಳಿ ಭಾಷೆ ಮಾತನಾಡುತಿದ್ದಾರೆ.

ವೃದ್ಧರ ವಾರಸುದಾರರು ಯಾರಾದರು ಇದ್ದಲ್ಲಿ ಉಡುಪಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ದೂ.ಸಂಖ್ಯೆ: 0820-2526394ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News