ಸಿವಿಲ್ ನ್ಯಾಯಾಧೀಶರಾಗಿ ವಿದ್ಯಾ ಎ.ಎಸ್. ನೇಮಕ

Update: 2021-02-27 16:36 GMT

ಪುತ್ತೂರು: ಪುತ್ತೂರಿನಲ್ಲಿ ವಕೀಲ ವೃತ್ತಿ ನಿರ್ವಹಿಸುತ್ತಿದ್ದ  ಒಳಮೊಗ್ರು ಗ್ರಾಮದ ಪರ್ಪುಂಜ ನಿವಾಸಿ ವಿದ್ಯಾ ಎ.ಎಸ್ ಅವರು ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.

ರಾಜ್ಯ ಉಚ್ಛನ್ಯಾಯಾಲಯದ ಅಧೀನದಲ್ಲಿರುವ ಸಿವಿಲ್ ನ್ಯಾಯಾಧೀಶರ ನೇಮಕಾತಿ ಕಮಿಟಿಯವರು ಕಳೆದ ನವೆಂಬರ್ ತಿಂಗಳಲ್ಲಿ ಸಿವಿಲ್ ಜಡ್ಜ್   ಹುದ್ದೆಗೆ ಲಿಖಿತ ಸ್ಪರ್ಧಾತ್ಮಕ  ಪರೀಕ್ಷೆ    ನಡೆಸಿತ್ತು . ಅದರಲ್ಲಿ ತೇರ್ಗಡೆ ಹೊಂದಿದವರಿಗೆ  ಇದೇ ತಿಂಗಳು ಸಂದರ್ಶನವನ್ನು ಅಯೋಜಿಸಿತ್ತು . ಈ ಎರಡರಲ್ಲೂ ತೇರ್ಗಡೆ ಹೊಂದಿದ ವಿದ್ಯಾ ಅವರು  ಸಿವಿಲ್ ನ್ಯಾಯಾಧೀಶರಾಗಿ ನೇರ ನೇಮಕಾತಿ ಹೊಂದಿದ್ದಾರೆ.

ವಿದ್ಯಾ ಎ.ಎಸ್ ಒಳಮೊಗ್ರು ಗ್ರಾಮದ ಪರ್ಪುಂಜದ ಶಿವಕುಮಾರ್-ಪಾರ್ವತಿ ದಂಪತಿಯ ಪುತ್ರಿಯಾದ ಅವರು ಕಳೆದ ಏಳು ವರ್ಷಗಳಿಂದ ಪುತ್ತೂರಿನಲ್ಲಿ ವಕೀಲ ವೃತ್ತಿ ನಿರ್ವಹಿಸುತ್ತಿದ್ದಾರೆ.  ನ್ಯಾಯವಾದಿ ಸೂರ್ಯನಾರಾಯಣ ಎನ್.ಕೆ.ಅವರ ಬಳಿ ಜೂನಿಯರ್ ವಕೀಲರಾಗಿ ಇವರು ವೃತ್ತಿ  ನಿರ್ವಹಿಸುತಿದ್ದರು.

ಸಂಪ್ಯ ಶಾಲೆಯಲ್ಲಿ  ಪ್ರಾಥಮಿಕ ಶಿಕ್ಷಣ, ಕುಂಬ್ರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಮತ್ತು ದ್ವಿತೀಯ ಪಿಯುಸಿ ಶಿಕ್ಷಣ ಪೂರೈಸಿದ್ದ ವಿದ್ಯಾ ಎ.ಎಸ್.ಅವರು ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News