ಮಾ. 5ರಿಂದ ಬೊಳ್ಳೂರು ಜುಮಾ ಮಸೀದಿಯಲ್ಲಿ ಮತ ಪ್ರವಚನ

Update: 2021-03-04 11:12 GMT

ಹಳೆಯಂಗಡಿ : ಮುಹಿಯುದ್ದಿನ್ ಜುಮಾ ಮಸೀದಿ ಬೊಳ್ಳೂರು ಹಳೆಯಂಗಡಿ ಇದರ ಅದೀನದ ಲಿಯಾವುಲ್ ಇಸ್ಲಾಂ ಧಪ್ಪ್ ಕಮಿಟಿಯ 38ನೇ ವಾರ್ಷಿಕ ರಿಫಾಯ್ಯೀಯ ಧಪ್ ರಾತಿಬ್, ದಾರ್ಮಿಕ ಮತ ಪ್ರವಚನ ಹಾಗೂ ಸಮಾರೋಪ ಸಮಾರಂಭ ಕಾರ್ಯಕ್ರಮವು ಮಾರ್ಚ್ 5 ಮತ್ತು 6 ರಂದು ನಡೆಯಲಿದೆ.

ಮಾರ್ಚ್ 5 ರಂದು ಕಾಸರಗೋಡಿನ  ಪ್ರಸಿದ್ಧ ಪ್ರಭಾಷಣಕಾರ  ಇಬ್ರಾಹಿಮ್ ಖಲೀಲ್ ಹುದವಿ ಅಲ್ ಮಾಲಿಕಿ ಮತ ಪ್ರಭಾಷಣ ನಡೆಸಲಿರುವರು, ಮಾ.6 ರ ಮಧ್ಯಾಹ್ನ 2 ಗಂಟೆಗೆ ರಿಫಾಯ್ಯೀಯ ರಾತಿಬ್ ಜರಗಲಿದ್ದು, ಸಂಜೆ 8 ಗಂಟೆಗೆ ನಡೆಯುವ ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೊಳ್ಳೂರು ಮಸೀದಿಯ ಖತೀಬ್ ಅಲ್ ಹಾಜ್ ಮುಹಮ್ಮದ್ ಅಝ್ಹರ್ ಫೈಝಿ ವಹಿಸಲಿದ್ದು,
ಅಲ್ ಹಾಜ್ ಅಬ್ದುಲ್ ಕಾದಿರ್ ಅಲ್ ಖಾಸಿಮಿ ಬಂಬ್ರಾಣ ಉದ್ಘಾಟನೆ ಗೈಯ್ಯುವರು. 

ಕೇರಳದ ಸುಪ್ರಸಿದ್ಧ ಅಸಯ್ಯಿದ್ ಅಲಿಯಾರ್ ತಂಙಳ್ ಮಲಪ್ಪುರಂ ಕೇರಳ ದುಆ ಆಶಿರ್ವಚನಕ್ಕೆ ನೇತೃತ್ವ ನೀಡುವ ಕಾರ್ಯಕ್ರಮದಲ್ಲಿ
ಸಿರಾಜುದ್ದೀನ್ ಪೈಝಿ ಬಪ್ಪಳಿಗೆ ಮುಖ್ಯ ಪ್ರಭಾಷಣ ನಡೆಸಲಿರುವರು ಎಂದು ಪ್ರಕಟಣೆ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News