ಗಾಝಿಯಾಬಾದ್ : ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ
Update: 2021-03-08 13:52 GMT
ಗಾಝಿಯಾಬಾದ್ : ದುರ್ನಡತೆಯ ಕಾರಣಕ್ಕಾಗಿ ತನ್ನನ್ನು ಬೈದ ಶಿಕ್ಷಕನಿಗೆ 12ನೇ ತರಗತಿಯ ವಿದ್ಯಾರ್ಥಿಯೊಬ್ಬ ಗುಂಡು ಹಾರಿಸಿದ ಘಟನೆಯು ನಡೆದಿದೆ.
ಶನಿವಾರ ಮಧ್ಯಾಹ್ನ ಇಲ್ಲಿನ ಸರಸ್ವತಿ ವಿಹಾರ ಕಾಲನಿಯಲ್ಲಿರುವ ಖಾಸಗಿ ಶಾಲೆಯಲ್ಲಿ ನಡೆದಿದೆ. ತರಗತಿ ಮುಗಿಸಿ ಮೋಟರ್ಸೈಕಲ್ನಲ್ಲಿ ತೆರಳುತ್ತಿದ್ದ ಸಚಿನ್ ತ್ಯಾಗಿಯತ್ತ ವಿದ್ಯಾರ್ಥಿ ಗುಂಡು ಹಾರಿಸಿದ್ದಾನೆ.
ಇತರ ವಿದ್ಯಾರ್ಥಿಗಳ ಜತೆ ಅನುಚಿತವಾಗಿ ವರ್ತಿಸದಂತೆ ಶಿಕ್ಷಕ ಈ ವಿದ್ಯಾರ್ಥಿಗೆ ಬುದ್ಧಿ ಹೇಳಿದ್ದರು. ಇದರಿಂದ ಅವಮಾನಿತನಾದ ವಿದ್ಯಾರ್ಥಿ ದ್ವೇಷ ಸಾಧಿಸಿ ಗುಂಡು ಹಾರಿಸಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಇರಾಜ್ ರಾಜಾ ಹೇಳಿದ್ದಾರೆ.
ಇತರ ಮೂವರು ಸಹಚರರೊಂದಿಗೆ ಈತ ದಾಳಿ ನಡೆಸಿದ್ದು, ನಾಲ್ವರನ್ನೂ ಸಿಸಿಟಿವಿ ತುಣುಕಿನ ಆಧಾರದಲ್ಲಿ ಪತ್ತೆ ಮಾಡಲಾಗಿದೆ. ವಿದ್ಯಾರ್ಥಿಗಳ ಕುಟುಂಬ ಸದಸ್ಯರನ್ನು ಪೊಲೀಸರು ವಿಚಾರಣೆಗೆ ಗುರಿಪಡಿಸಿದ್ದಾರೆ.