ಮೀನುಗಾರನ ಮೃತದೇಹ ಪತ್ತೆ

Update: 2021-03-10 15:39 GMT

ಗಂಗೊಳ್ಳಿ, ಮಾ.10: ಕೆಲವು ದಿನಗಳ ಹಿಂದೆ ಆಳ ಸಮುದ್ರದಲ್ಲಿ ಮೀನು ಗಾರಿಕೆ ನಡೆಸುತ್ತಿದ್ದ ಬೋಟಿನಿಂದ ಬಿದ್ದು ನಾಪತ್ತೆಯಾಗಿದ್ದ ನಾವುಂದ ಗ್ರಾಮದ ಗಣೇಶ ನಗರ ನಿವಾಸಿ ಪಾಂಡು(47) ಎಂಬವರ ಮೃತದೇಹವು ಮಾ.9ರಂದು ಸಂಜೆ ಗಂಗೊಳ್ಳಿ ಬಂದರಿನಿಂದ ಸುಮಾರು 4ಕಿ.ಮೀ ದೂರದ ಸಮುದ್ರದಲ್ಲಿ ಪತ್ತೆಯಾಗಿದೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News