ಬೈಕ್‌ ಉಪಕರಣಗಳನ್ನು ಕದ್ದ ಆರೋಪ: ಯುವಕನನ್ನು ಥಳಿಸಿ ಕೊಂದ ಗ್ರಾಮಸ್ಥರು

Update: 2021-03-14 17:21 GMT

ರಾಂಚಿ: ಬೈಕ್‌ ನ ಚಕ್ರಗಳು ಹಾಗೂ ಬ್ಯಾಟರಿಯನ್ನು ಕದ್ದಿದ್ದಾನೆಂದು ಆರೋಪಿಸಿ ಯುವಕನೋರ್ವನನ್ನು ಸ್ಥಳೀಯರು ಸೇರಿ ಥಳಿಸಿ ಕೊಂದ ಘಟನೆ ಜಾರ್ಖಂಡ್‌ ನ ರಾಂಚಿ ಸಮೀಪದ ಅಂಗಾರಾ ಎಂಬ ಪ್ರದೇಶದಲ್ಲಿ ನಡೆದಿದೆ. ಕೊಲೆಗೈಯಲ್ಪಟ್ಟ ಯುವಕನನ್ನು ಮುಬಾರಕ್‌ ಖಾನ್‌ ಎಂದು ಗುರುತಿಸಲಾಗಿದೆ ಎಂದು ANI ಸುದ್ದಿಸಂಸ್ಥೆಯು ವರದಿ ಮಾಡಿದೆ.

ಈ ಕುರಿತು ಮಾತನಾಡಿದ ರಾಂಚಿ ಎಸ್ಪಿ ನೌಶಾದ್‌ ಆಲಂ, "ಮುಬಾರಕ್‌ ಖಾನ್‌ ಎಂಬ ವ್ಯಕ್ತಿಯು ಬೈಕ್‌ ನ ಚಕ್ರಗಳು ಮತ್ತು ಬ್ಯಾಟರಿಯನ್ನು ಕದ್ದಿದ್ದಾನೆಂದು ಆರೋಪಿಸಿ ಶನಿವಾರ ರಾತ್ರಿ ಸ್ಥಳೀಯರು ಆತನನ್ನು ಥಳಿಸಿ ಕೊಂದಿದ್ದಾರೆ. ಈ ಕುರಿತಾದಂತೆ ಈಗಾಗಲೇ ನಾವು 11 ಮಂದಿಯನ್ನು ಬಂಧಿಸಿ ಕಸ್ಟಡಿಗೆ ತೆಗೆದುಕೊಂಡಿದ್ದೇವೆ. ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ" ಎಂದು ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News