ಕೋವಿ ಹಿಡಿದು ಬೇಟೆಗೆ ಪ್ರಯತ್ನ: ದೂರು
Update: 2021-03-29 16:11 GMT
ಅಜೆಕಾರು, ಮಾ. 29: ಕೆರ್ವಾಶೆ ಗ್ರಾಮದ ಮೀಸಲು ಅರಣ್ಯವಾದ ದೇವರ ಗುಂಡಿ ಎಂಬಲ್ಲಿ ಮಾ.27ರಂದು ಮಧ್ಯಾಹ್ನ ಇಬ್ಬರು ವ್ಯಕ್ತಿಗಳು ಕೋವಿ ಹಿಡಿದು ಕೊಂಡು ಬೇಟೆಗೆ ಪ್ರಯತ್ನ ನಡೆಸುತ್ತಿರುವ ಬಗ್ಗೆ ವರದಿಯಾಗಿದೆ.
ಕಾರ್ಕಳ ವನ್ಯಜೀವಿ ವಲಯ ಉಪವಲಯ ಅರಣ್ಯ ಅಧಿಕಾರಿ ಶಿವಾನಂದ ಸದೆಪ್ಪ ಮಾದರ, ಸಿಬ್ಬಂದಿ ಜೊತೆ ಸಿಂಗಳಿಕ ಗಣತಿ ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಇಬ್ಬರು ವ್ಯಕ್ತಿಗಳು ಕೋವಿಯನ್ನು ಹಿಡಿದುಕೊಂಡಿರು ವುದು ಕಂಡುಬಂದಿದ್ದು, ಅಧಿಕಾರಿ ಗಳನ್ನು ಕಂಡ ಇವರು ಕಾಡಿನಲ್ಲಿ ಓಡಿ ಪರಾರಿಯಾದರು.
ಇವರು ಸ್ಥಳದಲ್ಲಿ ಬಿಟ್ಟು ಹೋದ ಕೋವಿಗೆ ಬಳಸುವ ಮದ್ದುಗುಂಡುಗಳನ್ನು, ಚಪ್ಪಲಿಗಳನ್ನು ಹಾಗೂ ಮೊಬೈಲ್ನ್ನು ಅರಣ್ಯ ಇಲಾಖೆಯವರು ವಶಪಡಿಸಿ ಕೊಂಡರು. ಈ ಬಗ್ಗೆ ಅಜೆಕಾರು ಪೊಲೀ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.