ಡಾ. ಶರಣ ಕುಮಾರ ಲಿಂಬಾಳೆ ಅವರ ‘ಸನಾತನ್’ ಕೃತಿಗೆ ‘ಸರಸ್ವತಿ ಸಮ್ಮಾನ್’

Update: 2021-03-30 18:24 GMT

ಹೊಸದಿಲ್ಲಿ, ಮಾ. 30: ಮರಾಠಿ ಲೇಖಕ ಡಾ. ಶರಣಕುಮಾರ ಲಿಂಬಾಳೆ ಅವರ ‘ಸನಾತನ್’ ಕೃತಿ 2020ರ ಸರಸ್ವತಿ ಸಮ್ಮಾನಕ್ಕೆ ಆಯ್ಕೆಯಾಗಿದೆ. ಪ್ರಶಸ್ತಿ 15 ಲಕ್ಷ ರೂ., ಪ್ರಶಂಸಾ ಪತ್ರ ಹಾಗೂ ಫಲಕಗಳನ್ನು ಒಳಗೊಂಡಿರಲಿದೆ. 1991ರಲ್ಲಿ ಕೆ.ಕೆ. ಬಿರ್ಲಾ ಪ್ರತಿಷ್ಠಾನ ಸ್ಥಾಪಿಸಿದ ಸರಸ್ವತಿ ಸಮ್ಮಾನ ದೇಶದ ಪ್ರತಿಷ್ಠಿತ ಹಾಗೂ ಅತ್ಯುಚ್ಛ ಸಾಹಿತ್ಯ ಪ್ರಶಸ್ತಿಗಳಲ್ಲಿ ಒಂದು. ಡಾ. ಲಿಂಬಾಳೆ ಅವರು 2018ರಲ್ಲಿ ‘ಸನಾತನ್’ ಕೃತಿ ಪ್ರಕಟಿಸಿದ್ದರು. ‘ಸನಾತನ’ ದಲಿತರ ಹೋರಾಟದ ಪ್ರಮುಖ ಸಾಮಾಜಿಕ ಹಾಗೂ ಚಾರಿತ್ರಿಕ ದಾಖಲೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News