ಸಾಸ್ತಾನ: ಪ್ರತಿಭಾ ಪುರಸ್ಕಾರ, ಅಭಿನಂದನಾ ಸಮಾರಂಭ

Update: 2021-03-31 13:48 GMT

ಕೋಟ, ಮಾ.31: ಕರ್ನಾಟಕ ಯುನೈಟೆಡ್ ಕ್ರಿಶ್ಚನ್ ಅಸೋಸಿಯೇಶನ್ ಸಾಸ್ತಾನ ಸಂತ ಅಂತೋನಿ ದೇವಾಲಯ ಘಟಕದ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭವನ್ನು ಇತ್ತೀಚೆಗೆ ಹಂಗಾರಕಟ್ಟೆ ಚೇತನಾ ಫ್ರೌಢಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಸಂಸ್ಥೆಯ ರಾಜ್ಯಾಧ್ಯಕ್ಷ ಆಲ್ಬನ್ ಮೆನೇಜಸ್ ಉದ್ಘಾಟಿಸಿ ಶುಭಹಾರೈಸಿದರು. ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಯುಸಿಎ ಕರ್ನಾಟಕ ಅಧ್ಯಕ್ಷ ಸಿಲ್ವೆಸ್ಟರ್ ಡಿಸೋಜ ವಹಿಸಿದ್ದರು. ಚೇತನಾ ಪ್ರೌಢಶಾಲಾ ಮುಖ್ಯಶಿಕ್ಷಕ ಗಣೇಶ್ ಮಾತನಾಡಿದರು.

ಈ ಸಂದರ್ಭದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಸಾಧನೆಗೈದ ಪಾಂಡೇಶ್ವರ ಗ್ರಾಪಂ ಅಧ್ಯಕ್ಷೆ ಕಲ್ಪನಾ ದಿನಕರ ಪೂಜಾರಿ, ಉಪಾಧ್ಯಕ್ಷ ಸಿಲ್ವೆಸ್ಟರ್ ಡಿಸೋಜ, ಐರೋಡಿ ಗ್ರಾಪಂ ಅಧ್ಯಕ್ಷೆ ಗೀತಾ ಎ.ಶೆಟ್ಟಿ, ಉಪಾಧ್ಯಕ್ಷ ನಟರಾಜ್ ಗಾಣಿಗ, ಸದಸ್ಯ ಕಿರಣ್ ಥೋಮಸ್ ಡಯಾಸ್, ಕೊರೋನಾ ಸಂದಿಗ್ಧ ದಿನಗಳಲ್ಲಿ ಆಪತ್ಭಾಂಧವರಾಗಿ ಕಾರ್ಯನಿರ್ವಹಿಸಿದ ರುಪಾನ್ಸ್ ಲುವಿಸ್, ಸ್ವೀವನ್ ಲುವಿಸ್ ಹಾಗೂ ಸಾಧಕ ಶಿಕ್ಷಕಿ ಸೇಸು ಟೀಚರ್, ತಾಲೂಕು ಉತ್ತಮ ರೈತ ಮಹಿಳೆ ಜೆಸಿಂತ ಎಂ. ಡಿ.ಅ್ಮೆಡಾ ಅವರನ್ನು ಸನ್ಮಾನಿಸಲಾಯಿತು.

ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಗ್ರೀಷ್ಮಾ ಶೆಟ್ಟಿಗಾರ್ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸ ಲಾಯಿತು. ಪಾಂಡೇಶ್ವರ ಸೂಲುಕುದ್ರು ಗ್ರಾಮ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ನೆಲ್ಸನ್ ಬಾಂಜಿ, ಕಾರ್ಯದರ್ಶಿ ಸ್ಟೇನಿ ಡಿ.ಅಲ್ಮೇಡಾ, ಜ್ವಾಯಿಸ್ ಲುವಿಸ್ ಉಪಸ್ಥಿತರಿದ್ದರು. ಸಂಸ್ಥೆಯ ಸಾಸ್ತಾನ ಅಧ್ಯಕ್ಷ ಅಧ್ಯಕ್ಷ ವಿಜಯ್ ಲೂವಿಸ್ ಸ್ವಾಗತಿಸಿದರು. ಗ್ಲಾಡ್ ಲುವಿಸ್, ದಿವ್ಯ ಲುವಿಸ್ ಕಾರ್ಯಕ್ರಮ ನಿರೂಪಿಸಿ ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News