ದೀದಿ ನಂದಿಗ್ರಾಮ ಗೆಲ್ಲುತ್ತಾರೆ, ಬೇರೆಡೆ ಸ್ಪರ್ಧಿಸುವುದಿಲ್ಲ: ಪ್ರಧಾನಿ ಮೋದಿಗೆ ಟಿಎಂಸಿ ಪ್ರತ್ಯುತ್ತರ

Update: 2021-04-02 09:04 GMT

ಕೊಲ್ಕತ್ತಾ: ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮ ಕ್ಷೇತ್ರದಿಂದ ಖಂಡಿತ ಗೆಲ್ಲುತ್ತಾರೆ ಹಾಗೂ ಆಕೆ ಪಶ್ಚಿಮ ಬಂಗಾಳದಲ್ಲಿ ಬೇರೆ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಪಕ್ಷ  ಗುರುವಾರ ಸ್ಪಷ್ಟ ಪಡಿಸಿದೆ.

ಹೌರಾ ಜಿಲ್ಲೆಯ ಉಲುಬೇರಿಯಾ ಎಂಬಲ್ಲಿ ರ್ಯಾಲಿಯೊಂದನ್ನುದ್ದೇಶಿಸಿ  ಮಾತನಾಡಿದ್ದ ಮೋದಿ "ದೀದಿ ನೀವು ಬೇರೊಂದು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದೀರಿ ಎಂಬ ವದಂತಿ ನಿಜವೇ? ಮೊದಲು ನೀವು ಅಲ್ಲಿಗೆ (ನಂದಿಗ್ರಾಮ) ಹೋದಿರಿ ಹಾಗೂ ಜನರು ನಿಮಗೆ ಉತ್ತರ ನೀಡಿದ್ದಾರೆ.  ನೀವು ಬೇರೆಲ್ಲಿಗಾದರೂ ಹೋದರೆ ಬಂಗಾಳದ ಜನತೆ ಸಿದ್ಧರಿದ್ದಾರೆ" ಎಂದು ಹೇಳಿದ್ದರು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ತೃಣಮೂಲ ಕಾಂಗ್ರೆಸ್, "ದೀದಿ ನಂದಿಗ್ರಾಮದಲ್ಲಿ ಗೆಲ್ಲುತ್ತಾರೆ, ಆಕೆ ಇನ್ನೊಂದು ಕ್ಷೇತ್ರದಿಂದ ಸ್ಪರ್ಧಿಸುವ ಪ್ರಶ್ನೆ ಉದ್ಭವವಾಗುವುದಿಲ್ಲ. ನರೇಂದ್ರ ಮೋದಿ ಜನರು ಪಶ್ಚಿಮ ಬಂಗಾಳದಲ್ಲಿ ನಾಮಪತ್ರ ಸಲ್ಲಿಕೆ ಅಂತ್ಯಗೊಂಡಾಗ ನಿಮ್ಮ ಸುಳ್ಳುಗಳನ್ನು ಅರಿಯುವ ಮೊದಲು ಅವರನ್ನು ತಪ್ಪು ದಾರಿಗೆಳೆಯುವ ಯತ್ನಗಳಿಂದ ಹಿಂದೆ ಸರಿಯಿರಿ" ಎಂದು ಟ್ವೀಟ್ ಮಾಡಿದೆ.

ಟಿಎಂಸಿ ಸಂಸದೆ  ಮಹುವಾ ಮೊಯಿತ್ರಾ ಕೂಡ  ಪ್ರಧಾನಿ ಮೋದಿಯನ್ನು ವ್ಯಂಗ್ಯವಾಡಿದ್ದಾರೆ "ಎರಡನೇ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೀರಾ ಎಂದು ಪ್ರಧಾನಿ ಅವರು ಮಮತಾ ಬ್ಯಾನರ್ಜಿಯನ್ನು ಕುಟುಕಿದ್ದಾರೆ. ಹೌದು, ಮಿಸ್ಟರ್ ಪ್ರೈಮ್ ಮಿನಿಸ್ಟರ್,  ಖಂಡಿತ, ಆ ಕ್ಷೇತ್ರ ವಾರಣಾಸಿಯಾಗಲಿದೆ, ಅದಕ್ಕೆ ಸಿದ್ಧವಾಗಿ" ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News