​ಸಾಹಿತಿ ಡಾ. ಹೊಸ್ಕರೆ ಶಿವಸ್ವಾಮಿ ನಿಧನ

Update: 2021-04-04 04:36 GMT

ಉಡುಪಿ, ಎ.4: ಎಂ ಜಿ .ಎಂ ಕಾಲೇಜಿನ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥರು, ಸುದೀರ್ಘ ಕಾಲ ಕನ್ನಡ ವಿಭಾಗದ ಹಿರಿಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಡಾ. ಹೊಸ್ಕೆರೆ ಶಿವಸ್ವಾಮಿ ( 67) ಶನಿವಾರ ರಾತ್ರಿ ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.

ಕನ್ನಡ ಸಾಹಿತ್ಯ ಲೇೂಕಕ್ಕೆ ಅನುಪಮವಾದ ಕೊಡುಗೆ ನೀಡಿರುವ ಡಾ.ಹೊಸ್ಕರೆಯವರು ಕಡೆಂಗೇೂಡ್ಲು ಕವಿ ಸಾಹಿತ್ಯ ಪ್ರಶಸ್ತಿಗೂ ಭಾಜನರಾಗಿದ್ದರು. ಉತ್ತಮ ವಾಗ್ಮಿಗಳು ಆಗಿದ್ದ ಶಿವ ಸ್ವಾಮಿ ಬೇೂಧನಾ ವಿಧಾನದ ಕುರಿತಾಗಿ ಸಂಶೇೂಧನಾ ಪ್ರಬಂಧ ಮಂಡಿಸಿ ಡಾಕ್ಟರೇಟ್‌ ಪದವಿ ಗಳಿಸಿದ್ದರು.

ಎಂ.ಜಿ.ಎಂ ಕಾಲೇಜಿನಲ್ಲಿ ಸಾಹಿತ್ಯ ಕಟ್ಟಿ ಬೆಳೆಸಿದ  ಹೊಸ್ಕರೇ ಅವರು ಬಹು ಆಕಷಿ೯ತ ಉಚ್ಚಾರಣೆ ಮತ್ತು ಮಾತುಗಾರಿಕೆ ಯಿಂದ ವಿದ್ಯಾರ್ಥಿ ಗಳ ಗಮನ ಆಕಷಿ೯ಸುವ ವಿಶೇಷ ಪ್ರತಿಭಾವಂತ ಅಧ್ಯಾಪಕರೆಂಬ  ಹೆಗ್ಗಳಿಕೆ ಪಡೆದಿದ್ದರು. 

ಡಾ.ಹೊಸ್ಕೆರೆ ಅವರು ಪತ್ನಿ ಲೇಖಕಿ ನಾಗಮಣಿ, ಇಬ್ಬರು ಪುತ್ರರು, ಓವ೯ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News