ಉಳ್ಳಾಲ: ನಾಪತ್ತೆಯಾಗಿದ್ದ ಬಾಲಕ ಪತ್ತೆ

Update: 2021-04-04 10:20 GMT

ಉಳ್ಳಾಲ : ಠಾಣೆ ವ್ಯಾಪ್ತಿಯ ಕೋಟೆಪುರ ನಿವಾಸಿ ಅಶ್ರಫ್ ಎಂಬವರ ಪುತ್ರ ಮುಹಮ್ಮದ್ ತನುಫ್ (13) ಎಂಬಾತ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದು, ಬಂದರ್ ರಾತೀಬ್ ಕೊಟ್ಟಿಗೆ ಬಳಿ ಶನಿವಾರ ತಡರಾತ್ರಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಅಸಮಾಧಾನಗೊಂಡ ಮುಹಮ್ಮದ್ ತನುಫ್ ಯಾರ ಗಮನಕ್ಕೂ ಬಾರದ ರೀತಿಯಲ್ಲಿ ನಾಪತ್ತೆ ಆಗಿದ್ದ‌ .ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪೋಷಕರು ದೂರು ನೀಡಿದ್ದರು.

ತನುಫ್ ನಾಪತ್ತೆ ಆಗಿದ್ದ ವಿಚಾರ ಅರಿತ ಸ್ಥಳೀಯರು ಬಂದರ್ ರಾತೀಬ್ ಕೊಟ್ಟಿಗೆ ಬಳಿ ಬಾಲಕನೋರ್ವ ಇರುವ ಬಗ್ಗೆ ಗಮನಿಸಿ ಆತನನ್ನು ವಿಚಾರಿಸಿದ್ದು ,ಈ ವೇಳೆ ಆತ ಉಳ್ಳಾಲ ದಿಂದ ಬಂದಿರುವುದಾಗಿ ತಿಳಿಸಿದ್ದ. ಈ ವಿಚಾರ ವನ್ನು ಆತನ ಪೋಷಕರಿಗೆ ಅವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೋಷಕರು ಆತನನ್ನು ಕರೆದುಕೊಂಡು ಹೋಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News