ಭಾರತವು ತನ್ನ ಗಡಿಗಳಲ್ಲಿ ಮತ್ತೆ ಸವಾಲುಗಳನ್ನು ಎದುರಿಸುತ್ತಿದೆ: ಸೇನಾ ಮುಖ್ಯಸ್ಥ ಜ.ನರವಾಣೆ

Update: 2021-04-06 14:03 GMT

ಹೊಸದಿಲ್ಲಿ,ಎ.6: ಭಾರತವು ತನ್ನ ಗಡಿಗಳಲ್ಲಿ ಹೊಸದಾಗಿ ಸವಾಲುಗಳನ್ನು ಎದುರಿಸುತ್ತಿದೆ ಮತ್ತು ತರಬೇತಿಯಲ್ಲಿರುವ ಸಶಸ್ತ್ರ ಪಡೆಗಳ ಅಧಿಕಾರಿಗಳಿಗೆ ಇಂತಹ ಎಲ್ಲ ಬೆಳವಣಿಗೆಗಳ ಬಗ್ಗೆ ಮಾಹಿತಿಯಿರಬೇಕು ಎಂದು ಸೇನಾ ಮುಖ್ಯಸ್ಥ ಜ.ಎಂ.ಎಂ.ನರವಾಣೆ ಅವರು ಮಂಗಳವಾರ ಹೇಳಿದರು.

ಅವರು ತಮಿಳುನಾಡಿನ ವೆಲಿಂಗ್ಟನ್‌ನಲ್ಲಿಯ ಡಿಫೆನ್ಸ್ ಸರ್ವಿಸಿಸ್ ಸ್ಟಾಫ್ ಕಾಲೇಜ್(ಡಿಎಸ್‌ಎಸ್‌ಸಿ)ನಲ್ಲಿ ‘ಪಶ್ಚಿಮ ಮತ್ತು ಉತ್ತರದ ಗಡಿಗಳಲ್ಲಿಯ ಬೆಳವಣಿಗೆಗಳು ಮತ್ತು ಭಾರತೀಯ ಸೇನೆಯ ಭವಿಷ್ಯದ ಮಾರ್ಗಸೂಚಿಯ ಮೇಲೆ ಅವುಗಳ ಪರಿಣಾಮ’ಕುರಿತು ಬೋಧಕ ಸಿಬ್ಬಂದಿಗಳು ಮತ್ತು ತರಬೇತಿ ಪಡೆಯುತ್ತಿರುವ ಅಧಿಕಾರಿಗಳಿಗಾಗಿ ಉಪನ್ಯಾಸವನ್ನು ನೀಡುತ್ತಿದ್ದರು.

ಡಿಎಸ್‌ಎಸ್‌ಸಿ ಕಮಾಂಡಂಟ್ ಲೆ.ಜ.ಎಂಜೆಎಸ್ ಕಹ್ಲೋನ್ ಅವರು ಕಾಲೇಜಿನಲ್ಲಿ ನಡೆಯುತ್ತಿರುವ ತರಬೇತಿ ಕೋರ್ಸ್‌ಗಳ ಬಗ್ಗೆ ಇತ್ತೀಚಿನ ಮಾಹಿತಿಗಳನ್ನು ಸೇನಾ ಮುಖ್ಯಸ್ಥರಿಗೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News