ಮಂಗಳೂರು ವಿವಿ ಘಟಿಕೋತ್ಸವ: ಚಿನ್ನದ ಪದಕದೊಂದಿಗೆ ನಾಲ್ಕು ನಗದು ಪುರಸ್ಕಾರ ಪಡೆದ ಪ್ರಮಿತಾ

Update: 2021-04-10 12:07 GMT

ಕೊಣಾಜೆ: ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ  ಭೌತಶಾಸ್ತ್ರದಲ್ಲಿ ಎಂಎಸ್ಸಿ ಮಾಡಿರುವ ಪ್ರಮಿತಾ ಅವರು ಶನಿವಾರ ಮಂಗಳೂರು ವಿವಿಯಲ್ಲಿ ನಡೆದ ಘಟಿಕೋತ್ಸವದಲ್ಲಿ ಪ್ರಥಮ ರ್ಯಾಂಕ್‍ನೊಂದಿಗೆ ಒಂದು ಚಿನ್ನದ ಪದಕ ಹಾಗೂ ನಾಲ್ಕು ನಗದು ಪುರಸ್ಕಾರವನ್ನು ಪಡೆದಿದ್ದಾರೆ.

ಸುಳ್ಯದ ಕೃಷಿಕ ಶ್ರೀಪ್ರಸಾದ್ ಬಾರಿತ್ತಾಯ ಹಾಗೂ ಶಾಲಾ ಮುಖ್ಯೋಪಾದ್ಯಾಯಿನಿಯಾಗಿರುವ ಪದ್ಮಾ ಎಂಬವರ ಪುತ್ರಿಯಾಗಿರುವ ಪ್ರಮಿತ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಪದವಿ ಪೂರೈಸಿ ಏಳನೇ ರ್ಯಾಂಕ್ ಪಡೆದಿದ್ದರು. ಇದೀಗ ಮಣಿಪಾಲದ ಎಂಐಟಿಯಲ್ಲಿ ಪಿಎಚ್‍ಡಿ ಅಧ್ಯಯನ ಮಾಡುತ್ತಿರುವ ಅವರು ಭೌತಶಾತ್ರ ಕ್ಷೇತ್ರದಲ್ಲಿ ಸಂಶೋಧನೆಯಲ್ಲಿ ತೊಡಗಿಸಿಕೊಂಡು ಸಾಧನೆಮಾಡಬೇಕೆಂಬ ಕನಸು ಹೊತ್ತುಕೊಂಡಿದ್ದಾರೆ. ನನ್ನ ಸಾಧನೆಗೆ ತಂದೆ ತಾಯಿಯೇ ಪ್ರೇರಣೆ ಎಂದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News